ಶಿವಮೊಗ್ಗ: ನವ್ಯಶ್ರೀ ಈಶ್ವರವನ ಟ್ರಸ್ಟ್ ವತಿಯಿಂದ ಶಿವರಾತ್ರಿ ದಿನದಂದು ಮಾಜಿ ನಗರಸಭಾ ಅಧ್ಯಕ್ಷ ಮತ್ತು ಹೊಯ್ಸಳ ಸೊಸೈಟಿ ಅಧ್ಯಕ್ಷ ಎಂ.ಶಂಕರ್ ಅವರಿಗೆ ಈಶ್ವರವನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ನವ್ಯಶ್ರೀ ನಾಗೇಶ್ ಅವರು ಹೊಯ್ಸಳ ಡಯಾಲಿಸಿಸ್ ಆಸ್ಪತ್ರೆಯ ಬಡ ರೋಗಿಗಳ ಔಷಧಕ್ಕಾಗಿ 50,000 ರೂಪಾಯಿಗಳನ್ನು ನೀಡಿದರು. ಹೊಯ್ಸಳ ಸೊಸೈಟಿ ನಿರ್ದೇಶಕರಾದ ಪ್ರಭಾಕರ್, ಸೋಗನೆ ರಮೇಶ್, ನಾಗಭೂಷಣ್, ಕೃಷ್ಣಮೂರ್ತಿ, ಆಶ್ರಯ ಸಮಿತಿ ಸದಸ್ಯ ಯಶೋಧರ ಹೆಗ್ಡೆ, ವಿಕ್ರಮ ಪತ್ರಿಕೆ ಸಂಪಾದಕ ವೃಷಾಂಕ್ ಭಟ್, ಪ್ರಮುಖರಾದ ದಿನೇಶ್, ಗಣೇಶ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…