ಶಿವಮೊಗ್ಗ : ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ವಿ. ಸತ್ಯನಾರಾಯಣ (ಸತೀಶ್), ಉಪಾಧ್ಯಕ್ಷರಾಗಿ ಭಾನುಪ್ರಕಾಶ್.ಎನ್. ಉಪಾಧ್ಯಕ್ಷರು, ಕಾರ್ಯದರ್ಶಿಯಾಗಿ ಧನಂಜಯ.ಹೆಚ್. ಹಾಗೂ ಖಜಾಂಚಿಯಾಗಿ ಯೋಗಿಶ್.ಪಿ.ಎಸ್. ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರ.ಆರ್. ಸಂಘಟನಾ ಕಾರ್ಯದರ್ಶಿ, ಮಾದ್ಯಮ ಪ್ರತಿನಿಧಿಯಾಗಿ ಮಾಲತೇಶ್.ಎನ್ ., ನಿರ್ದೇಶಕರುಗಳಾಗಿ ಸಂಜಯ್ ಕುಮಾರ್ ಆರ್., ಕುಮಾರ್.ಎನ್ ಪ್ರವೀಣ್ ಕುಮಾರ್., ಮಂಜುನಾಥ್.ಬಿ., ಚೇತನ್.ಎಸ್. ಇವರುಗಳು ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಯುವರಾಜ್ ಕರ್ತವ್ಯ ನಿರ್ವಹಿಸಿದರು. ಜೈಲ್‌ರಸ್ತೆಯಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಚುನಾವಣೆ ನಡೆಯಿತು. ನೂತನ ಪದಾಧಿಕಾರಿಗಳನ್ನು ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…