ಶಿವಮೊಗ್ಗ: ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು. ಮಾನವೀಯತೆ ಎನ್ನುವುದು ಹೃದಯದಿಂದ ಬರಬೇಕು. ಜಾತ್ರೆ ಎಂದರೆ ಎಲ್ಲರೂ ಒಟ್ಟಾಗುವ ಒಂದು ಸಂದರ್ಭ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

ಅವರು ಇಂದು ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಪ್ರೈ.ಲಿ. ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸೂಕ್ತ ಹವನ ಪೂರ್ನಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೋಟೆ ಮಾರಿಕಾಂಬ ಜಾತ್ರೆಯ ಸಂದರ್ಭದಲ್ಲಿ ವಿಶೇಷವಾಗಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಶ್ವರಪ್ಪ ಕುಟುಂಬ ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮಾತೆಯರಿಗೆ ಬಾಗಿನ ಮತತ್ಉ ಸೀರೆಯನ್ನು ಅರ್ಪಿಸಿ ವಿಶೇಷವಾಗಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ, ನೇತ್ರದಾನ ಶಿಬಿರ ಮತತ್ಉ ಮೆಡಿಕಲ್ ಕ್ಯಾಂಪ್ ಗಳನ್ನು ಹಮ್ಮಿಕೊಳ್ಳಲಿ ಎಂಬುದು ನನ್ನ ಆಶಯ ಎಂದರು.

ಯಥಾರಾಜ ತಥಾ ಪ್ರಜಾ ಎನ್ನುವಂತೆ ಕಾಂತೇಶ್ ಅವರು ಯಥಾ ಪಿತಾ ತಥಾ ಪುತ್ರ ಅನ್ನುವಂತೆ ತಂದೆಯ ಗುಣಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೃದಯದಿಂದ ಮನುಷ್ಯತ್ವ ಗೆದ್ದಿದ್ದಾರೆ. ಜಾತ್ರೆಯಿಂದಲೇ ಭಾರತೀಯ ಸಂಸ್ಕೃತಿ ಉಳಿದಿದೆ. ಹಿಂದೂ ಎಂದರೆ ಒಂದು ಎಂಬ ಅರ್ಥವಿದೆ. ಶಿವಮೊಗ್ಗದಲ್ಲಿ ಎಲ್ಲರೂ ಸಹಿಷ್ಣುತೆಯಿಂದ ಇರಬೇಕು. ಯಾವುದೇ ಗಲಾಟೆ ಆಗಬಾರದು. ಎಲ್ಲರೂ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶ ಈ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಆಗಿದೆ. ಇದಕ್ಕಾಗಿಯೇ ಸುಖ, ಸೌಭಾಗ್ಯ ನೆಮ್ಮದಿ ನೀಡುವ ಶ್ರೀ ಸೂಕ್ತ ಹವನ ಹಮ್ಮಿಕೊಳ್ಳಲಾಗಿದೆ ಎಂದರು.ಧರ್ಮಕ್ಕೆ ವಿರುದ್ಧವಾಗಿದ್ದರೆ ಮಾರಿಯಾಗುತ್ತಾರೆ. ಧರ್ಮದಿಂದ ಇದ್ದರೆ ನಾರಿಯಾಗುತ್ತಾರೆ. ಈ ದೇಶದಲ್ಲಿ ಸಂಸ್ಕೃತಿ ಉಳಿದಿದೆ ಎಂದಾದರೆ ಅದು ನಾರಿಯರಿಂದ ಮಾತ್ರ. ಭವದಿಂದ ಭಯವನ್ನು ದಾಟಿಸುವ ತಾಯಿ ಮಾರಿಕಾಂಬೆಯಾಗಿದ್ದಾಳೆ. ಊರಿಗೆ ಬರುವ ರೋಗ ಓಡಿಸುವ ಕಾರ್ಯವನ್ನು ಮಾರಿಕಾಂಬೆ ಮಾಡುತ್ತಾಳೆ. ಮಕ್ಕಳಿಗೆ ಕಷ್ಟ ಬಂದಾಗ ತಾಯಿಯ ಮಡಿಲಿಗೆ ಮಡಿಲಕ್ಕಿ ಸಮರ್ಪಿಸಿ ತಮ್ಮ ಭಾರವನ್ನು ಕರಗಿಸುವಂತೆ ದೇವಿಗೆ ಬೇಡುತ್ತಾರೆ ಎಂದರು.

ಶಿವಮೊಗ್ಗದಲ್ಲಿ ಧರ್ಮಕ್ಕೆ ಚ್ಯುತಿ ಬಾರದ ಹಾಗೇ ಶಾಂತಿ ನೆಲೆಸಲಿ. ಊರಿಗೆ ದೇವಿ ಕಾಪಾಡಿದರೆ ಶಿವಮೊಗ್ಗಕ್ಕೆ ಕ್ಷೇತ್ರಪಾಲಕನಂತೆ ಈಶ್ವರಪ್ಪ ಕಾಯುತ್ತಿದ್ದಾರೆ ಎಂದರು.ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಗುರುಗಳು ಮತತ್ಉ ನೂರಾರು ಮಾತೆಯರು ಒಟ್ಟಿಗೆ ಕಾಣ ಸಿಗುವುದು ಬಹಳ ವಿರಳ. ನಾನು ಇಬ್ಬರು ಅಕ್ಕ, ತಂಗಿಯರನ್ನು ಕಳೆದುಕೊಂಡಿದ್ದೇನೆ. ಆದರೆ, ಹತ್ತಾರು ಸಾವಿರ ಅಕ್ಕತಂಗಿಯರು ಮತ್ತು ತಾಯಂದಿರು ಮಾರಿಕಾಂಬ ಮೈಕ್ರೋ ಫೈನಾನ್ಸ್ ಮೂಲಕ ನನಗೆ ಸಿಕ್ಕಿದ್ದಾರೆ. ನನ್ನ ಕೊನೆಯ ಉಸಿರಿರುವವರೆಗೆ ಸೀರೆ ಬಾಗಿನ ಕೊಟ್ಟೇ ಕೊಡುತ್ತೇನೆ ಎಂದರು.ವೇದಿಕೆಯಲ್ಲಿ ಶ್ರೀ ಆನಂದ್ ಗುರೂಜಿ, ಶ್ರೀ ಶ್ರೀನಾಥ್ ಗುರೂಜಿ, ಕೆ.ಇ. ಕಾಂತೇಶ್, ಜಯಲಕ್ಷ್ಮಿ ಈಶ್ವರಪ್ಪ, ಚೈತ್ರಾ ಕುಂದಾಪುರ, ಮೇಯರ್ ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಶಂಕರ್ ಗನ್ನಿ, ಸುರೇಖಾ ಮುರಳೀಧರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…