ಶಿವಮೊಗ್ಗ ನ್ಯಾಷನಲ್ ಕಾಲೇಜ್ ಆಫ್ ಫಾರ್ಮಸಿ, ಉಪನ್ಯಾಸಕರಾದ ಸಂಪನ್ಮೂಲ ವ್ಯಕ್ತಿ: ಟಿ.ಎಂ.ಇಂದೂಧರ್ ರವರಿಂದ ಸಾಮಾನ್ಯ ಕಾಯಿಲೆಗಳಾದ ನೆಗಡಿ, ಕೆಮ್ಮು, ಚರ್ಮವ್ಯಾದಿ,ಇವುಗಳಿಗೆ ಅಡಿಗೆ ಮನೆಯ ಸಾಮಗ್ರಿಗಳಿಂದಲೇ ಎಲ್ಲಾ ರೋಗಕ್ಕೂ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು ಎಂಬ ಉಪಯುಕ್ತ ಮಾಹಿತಿ ತಿಳಿಸಿದರು. ಶರಾವತಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ವಾಣಿ ರತ್ನಾಕರ್ ಎಲ್ಲರನ್ನೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀ, ಪ್ರಸನ್ನನಾಥ ಸ್ವಾಮೀಜಿ, ಕಾರ್ಯದರ್ಶಿಗಳು ಆದಿಚುಂಚನಗಿರಿ ಮಠ, FPAನ ಉಪಾಧ್ಯಕ್ಷರಾದ ಶ್ರೀಮತಿ ಭಾರತೀ ಚಂದ್ರಶೇಖರ, ಖಜಾಂಜಿ Dr ಸಾಥ್ವಿಕ್, ಶರಾವತಿ ಮಹಿಳಾ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಮಮತಾ ವಿಜಯ್, ಕಾರ್ಯದರ್ಶಿಗಳಾದ ಶ್ರೀ ಮತಿ ಸುಮಾ ಜಯಂತ್, ಖಜಾಂಜಿಗಳಾದ ಶ್ರೀಮತಿ ಜಯಲಕ್ಷ್ಮಿಚಂದ್ರಹಾಸ್ ಹಾಗೂ FPAನ ಸದಸ್ಯರು, ಇನ್ನೂ ಇತರರೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153