ಇಂದು ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ಪೊಲೀಸರು ಕಟ್ಟೆಚ್ಚರದಿಂದ ತಪಾಸಣೆ ನಡೆಸಿದರು . ಅನಗತ್ಯವಾಗಿ ಮನೆಯಿಂದ ಹೊರಗೆ ಬಂದವರಿಗೆ ಸೂಕ್ತ ಕಾರಣ ನೀಡದೆ ಇದ್ದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಬಹುತೇಕರು ವೈದ್ಯಕೀಯ ಕಾರಣ ನೀಡಿದರೂ ಕೂಡ ಸಂಬಂಧಪಟ್ಟ ದಾಖಲೆಗಳನ್ನು ಕೇಳಲಾಗಿದೆ. ಆದ್ದರಿಂದ ಆದಷ್ಟು ಸಾರ್ವಜನಿಕರು ಮನೆಯಲ್ಲೇ ಇರುವುದು ಒಳಿತು . ಅನಗತ್ಯವಾಗಿ ಹೊರಗೆ ಬಂದಲ್ಲಿ ದಂಡ ಕಟ್ಟಿಟ್ಟ ಬುತ್ತಿ
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ