ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಯಮನ ರಂಗೇಗೌಡ ಅವರು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೂ ತಮ್ಮ ಧನ್ಯವಾದಗಳನ್ನು ತಿಳಿಸಿದರು . ವಿಶೇಷವಾಗಿ ಎಲ್ಲರಿಗೂ ಮಾದರಿಯಂತೆ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಎಲ್ಲರ ಗಮನ ಸೆಳೆದಿದೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ ಅವರ ಮಾತೃ ಹೃದಯದ ಪರಿಚಯ ಇಲ್ಲದವರು ಯಾರು ಇಲ್ಲ. ಇಂಥ ಲಾಕ್ ಡೌನ್ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಇಂದಿರಾ ಕ್ಯಾಂಟೀನ್ ಮುಖಾಂತರ ನಡೆದ ಅನ್ನದಾಸೋಹ ಶ್ಲಾಘನೀಯ ಇದರ ನೇತೃತ್ವ ವಹಿಸಿದ ಕಿಮ್ಮನೆ ರತ್ನಾಕರ ಅವರಿಗೆ ಧನ್ಯವಾದ ತಿಳಿಸಿದರು. ಎಂದಿನಂತೆ ಜನರು ಕಷ್ಟದಲ್ಲಿರುವಾಗ ಸಹಾಯಕ್ಕೆ ಬರುವುದು ಕಾಂಗ್ರೆಸ್ ಪಕ್ಷ ಮಾತ್ರ. ಶಿವಮೊಗ್ಗದಿಂದ ನಡೆದ ಎಲ್ಲಾ ಅನ್ನ ದಾಸೋಹದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಡಗಿಸಿಕೊಂಡಿದ್ದು ತುಂಬ ಹರ್ಷ ತಂದಿದೆ ಎಂದು ತಿಳಿಸಿದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153