ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ರಾಜಕಾಲುವೆ ಸುತ್ತಮುತ್ತಲಿನ ಪ್ರದೇಶಕ್ಕೆ ಇತ್ತೀಚಿಗೆ ಭಾರಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಉಪ ಮಹಾಪೌರ ಗನ್ನಿ ಶಂಕರ್ ಅವರು ನೇತೃತ್ವದಲ್ಲಿ ಆಯುಕ್ತ ಮಾಯಣ್ಣಗೌಡ, ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಪಾಲಿಕೆಯ ಎಲ್ಲ ಸ್ಥರದ ಅಧಿಕಾರಿಗಳು ಆಗಮಿಸಿ  ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪಾಲಿಕೆ ವತಿಯಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಭಾರಿ ಮಳೆಯಿಂದ ಪ್ರತಿ ವರ್ಷವೂ ಸಹ ಈ ಭಾಗದ ರಾಜಕಾಲುವೆಗೆ ಸಮಸ್ಯೆಯಿಂದ ಜನರು ನರಕಯಾತನೆ ಅನುಭವಿಸುತ್ತಿದ್ದು, ರಾಜಕಾಲುವೆ ಕಾಮಗಾರಿ ನಡೆಸಲು ಶಾಸಕರೊಂದಿಗೆ ಚರ್ಚಿಸಿ ಬೇಗ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಉಪ ಮೇಯರ್ ಗನ್ನಿ ಶಂಕರ್ ಹೇಳಿದರು. ಈ ಸಂದರ್ಭದಲ್ಲಿ ಅಲ್ಲಿಯ ಜನರು ರಾಜಕಾಲುವೆ ಸಮಸ್ಯೆ ಬಗೆಹರಿಸಿ ಮುಕ್ತಿ ನೀಡಿ ಎಂದು ಕೇಳಿಕೊಂಡರು.ಈ ಸಂದರ್ಭದಲ್ಲಿ ಮುಖಂಡರಾದ ಕೆ. ರಂಗನಾಥ್, ಲೋಹಿತ್, ಸುನಿತಾ, ಅನುಪಮಾ, ಕಸ್ತೂರಮ್ಮ, ಆನಂದ್ ಹಾಗೂ ಇತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…