ಶಿವಮೊಗ್ಗ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಕುರಿತಂತೆ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿರುವುದು ಅತ್ಯಂತ ನೀಚತನವಾಗಿದೆ. ಅವರ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಮತ್ತು ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರಕ್ಕ ಸಂಬಂಧಿಸಿದಂತೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆಗಿರುವ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ಲಜ್ಜೆಗೆಟ್ಟ ಹೇಳಿಕೆ ಅವರ ಸಂಸ್ಕøತಿಯನ್ನೇ ತಿಳಿಸುತ್ತದೆ. ಅವರಿಗೆ ಮಾನವೂ ಇಲ್ಲ. ಮರ್ಯಾದೆಯೂ ಇಲ್ಲ. ಪ್ರಕರಣವೊಂದರಲ್ಲಿ ಎ1 ಆರೋಪಿಯಾಗಿದ್ದಾರೆ. ಕೊಲೆಗಡುಕ ಪಟ್ಟ ಹೊತ್ತಿದ್ದಾರೆ. ಅಂತಹವರನ್ನು ಸರ್ಕಾರ ಬಂಧಿಸುವುದು ಬಿಟ್ಟು ಹೀಗೆ ಹುಚ್ಚು ಹುಚ್ಚಾಗಿ ಮಾತನಾಡಲು ಬಿಟ್ಟಿದ್ದಾರೆ. ತಕ್ಷಣವೇ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಎಂ.ಪಿ. ರೇಣುಕಾಚಾರ್ಯ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮುಂತಾದವರ ಹುಚ್ಚರ ಕೂಟವೇ ಇದೆ. ಆ ಹುಚ್ಚರ ಕೂಟದ ಅಧ್ಯಕ್ಷ ಈ ಈಶ್ವರಪ್ಪ. ಇಂತಹವರ ಅಚಾತುರ್ಯಗಳನ್ನು ಕೀಳುಮಟ್ಟದ ಹೇಳಿಕೆಗಳನ್ನು ಮುಖ್ಯಮಂತ್ರಿ ಸಹಿಸಿಕೊಳ್ಳುತ್ತಿರುವುದೇ ಹೆಚ್ಚಿನ ವಿಚಾರ. ಅವರು ಮುಖ್ಯಮಂತ್ರಿಯಾಗಲು ಅರ್ಹರೇ ಅಲ್ಲ. ಅದರ ಬದಲು ಪಕ್ಷದ ಮ್ಯಾನೇಜರ್ ಹುದ್ದೆ ನಿರ್ವಹಿಸಲಿ ಎಂದು ಟೀಕಿಸಿದರು.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಬಿಜೆಪಿ ಮುಖಂಡರುಗಳು ಅವರದೇ ಪಕ್ಷದ ಸಿದ್ಧಾಂತ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಬೀದಿಯಲ್ಲಿ ನಿಂತು ಅರಚುತ್ತಿದ್ದಾರೆ. ಕಿರುಚುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಅವರ ನಾಲಿಗೆಗಳು ಸಂಸ್ಕøತಿಯನ್ನ ಕಳೆದುಕೊಂಡಿವೆ. ಅನೇಕ ಪ್ರಕರಣಗಳು ದಾಖಲಾಗಿವೆ. ಇಷ್ಟಾದರೂ ತಾವೇ ಶ್ರೇಷ್ಠ ಎಂದು ಹೇಳುತ್ತಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತಂತೆ ಅದೇ ರೀತಿ ರಾಜಕಾರಣದಿಂದ ದೂರ ಸರಿಯಲಿರುವ ಈಶ್ವರಪ್ಪ ಈಗ ಉರಿಯುತ್ತಿದ್ದಾರೆ. ಅವರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮತ್ತೊಮ್ಮೆ ಹೋರಾಟಕ್ಕೆ ಇಳಿಯುತ್ತದೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಸಮರ್ಥ ಆಡಳಿತ ನಡೆಸಿದ್ದಾರೆ. ಅವರದ್ದು ಭ್ರಷ್ಟಾಚಾರ ರಹಿತ ಆಡಳಿತವಾಗಿದೆ. ಅನೇಕ ಭಾಗ್ಯ ಯೋಜನೆಗಳು ಬಡವರಿಗೆ ವರದಾನವಾಗಿವೆ. 13 ಬಾರಿ ಬಜೆಟ್ ಮಂಡಿಸಿದ್ದಾರೆ. ಆದರೆ, ಯಾವ ಯೋಗ್ಯತೆಯೂ ಇಲ್ಲದ, ಕೊನೇ ಪಕ್ಷ ಸಚಿವ ಪಟ್ಟವನ್ನೂ ಉಳಿಸಿಕೊಳ್ಳಲಾಗದ ಈಶ್ವರಪ್ಪ ಈ ರೀತಿ ಬಾಯಿಗೆ ಬಂದಂತೆ ಅರಚುತ್ತಿರುವುದು ಸರಿಯಲ್ಲ. ಚೆಡ್ಡಿಯೇನು ರಾಷ್ಟ್ರಧ್ವಜವಲ್ಲ. ಈಶ್ವರಪ್ಪರ ಹಾಗೆ ರಾಷ್ಟ್ರಧ್ವಜಕ್ಕೆ ಸಿದ್ದರಾಮಯ್ಯ ಅವಮಾನವನ್ನೂ ಮಾಡಿಲ್ಲ. ತನ್ನೆಲ್ಲಾ ಹÀಗರಣಗಳನ್ನು ಮರೆಮಾಚಲು ಬಿಜೆಪಿ ಇಂತಹ ಹೇಳಿಕೆಗಳ ಮೂಲಕ ಜನರ ದಿಕ್ಕನ್ನು ಬದಲಾಯಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಸಿ.ಎಸ್. ಚಂದ್ರಭೂಪಾಲ್, ಇಕ್ಕೇರಿ ರಮೇಶ್, ರಾಮೇಗೌಡ, ಚಂದ್ರಶೇಖರ್, ಜಿ.ಡಿ. ಮಂಜುನಾಥ, ಚಂದನ್, ಎನ್.ಡಿ. ಪ್ರವೀಣ್, ಜಿ. ಪಲ್ಲವಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…