ಶಿವಮೊಗ್ಗ: ಇಂದು ಪಾಲಿಕೆಯ ವಾರ್ಡ್ ನಂಬರ್ 14ರ ಸುಭಾಷ್ ನಗರದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ  ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.

ಸುಮಾರು ವರ್ಷಗಳಿಂದ ಹಕ್ಕುಪತ್ರ ವಿತರಣೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳ ಕಾರಣದಿಂದಾಗಿ ಈ ಹಿಂದೆ ನೀಡಲಾಗಿದ್ದ ಹಕ್ಕುಪತ್ರಗಳಿಗೆ ಖಾತೆ ನೀಡಲು ಸಾಧ್ಯವಾಗಿರುವುದಿಲ್ಲ, ಹಾಗಾಗಿ ಪ್ರಸ್ತುತ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು.
ಹಕ್ಕುಪತ್ರಗಳ ಆಧಾರದ ಮೇಲೆ ಫಲಾನುಭವಿಗಳು ಮಹಾನಗರಪಾಲಿಕೆಯಲ್ಲಿ ಖಾತೆಗಳನ್ನು ಮಾಡಿಸಿಕೊಳ್ಳಬಹುದು ಸರ್ಕಾರದ ವಸತಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದು. ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಅವಶ್ಯಕ ಮಾಹಿತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸ್ಲಮ್ ಬೋರ್ಡ್ ಅಧಿಕಾರಿಗಳು, ಪಾಲಿಕೆ ವಿರೋಧ ಪಕ್ಷದ ನಾಯಕಿ ಯುಮುನಾ ರಂಗೇಗೌಡ, ಮುಖಂಡ  ರಂಗೇಗೌಡರು, ಫಲಾನುಭವಿಗಳು, ನಾಗರಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…