ಶಿವಮೊಗ್ಗ: ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿ ವಕೀಲರ ವೇದಿಕೆ ಹಾಗೂ ಎನ್‍ಎಸ್‍ಎಸ್ ಸಹಯೋಗದಲ್ಲಿ  ಇಂದು ಬೆಳಿಗ್ಗೆ ವನಮಹೋತ್ಸವ ಕಾರ್ಯಕ್ರಮವನ್ನು  ಜ್ಞಾನೇಶ್ವರಿ ಗೋಶಾಲೆ ಅವರಣದಲ್ಲಿ  ಏರ್ಪಡಿಸಲಾಗಿತ್ತು.

100 ಸಸಿಗಳು ನೆಡುವ  ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಜಿ.ಆರ್. ಜಗದೀಶ್ ಉದ್ಘಾಟಿಸಿ ಮಾತನಾಡಿ, ಗೋವುಗಳ ಸಂರಕ್ಷಣೆಗಾಗಿ ಕಾನೂನು ವಿದ್ಯಾರ್ಥಿಗಳು ಮಾಡುತ್ತಿರುವ ಕೆಲಸ ಅನನ್ಯವಾಗಿದೆ, ಇಂಥ ಕೆಲಸಗಳು ಸಮಾಜದಲ್ಲಿ ಹೆಚ್ಚಿನದಾಗಿ ಆಗಬೇಕು  ಹಾಗೂ ಗೋ ಶಾಲೆಯವರು ಮಾಡುತ್ತಿರುವ ಕೆಲಸಕ್ಕೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಕಾಂತರಾಜ್, ಕಾಲೇಜಿನ ಎಲ್ಲಾ ಉಪನ್ಯಾಸಕರು, ಜ್ಞಾನೇಶ್ವರಿ ಗೋಶಾಲೆಯ ಸೋಮೇಶ್, ಶ್ರೀಪಾದ್, ವಿದ್ಯಾರ್ಥಿ ವಕೀಲರ ವೇದಿಕೆ ಅಧ್ಯಕ್ಷ ರಾಕೇಶ್, ಕಾರ್ಯದರ್ಶಿ ನಿಖಿಲ್ ಕೆಂಪೇಗೌಡ , ಸದಸ್ಯರಾದ – ಸುವರ್ಣ ಗೋಪಾಲ್, ವಿಶ್ವನಾಥ್ ಒಡೆಯರ್ ರಮೇಶ್, ರಾಕೇಶ್ ಭಗೀರಥ , ಗೌತಮ್, ಪ್ರಿಯಾಂಕ ಇತರ ವಿದ್ಯಾರ್ಥಿಗಳಿದ್ದರು.

ವರದಿ ಮಂಜುನಾಥ್ ಶೆಟ್ಟಿ…