ಶಿವಮೊಗ್ಗದ ಎಲ್ಲಾ ವರ್ತಕರು, ಉದ್ದಿಮೆದಾರರು, ಹಾಗೂ ವೃತ್ತಿ ನಿರತರು ಕಡ್ಡಾಯವಾಗಿ ಉದ್ದಿಮೆ ಪರವಾನಗಿ(ಟ್ರೇಡ್ ಲೈಸೆನ್ಸ್) ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಮಹಾನಗರಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಮತಿ ಸುನಿತಾ ಅಣ್ಣಪ್ಪ ಹೇಳಿದರು.

ಅವರು ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಮತ್ತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಎರಡು ದಿನಗಳು ಕಾಲ ನಡೆಯುತ್ತಿರುವ ಉದ್ದಿಮೆ ಪರವಾನಿಗೆ(ಟ್ರೇಡ್ ಲೈಸೆನ್ಸ್) ನೀಡುವ ಬೃಹತ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಸಧ್ಯಕ್ಷರಾದ ಜೆ.ಆರ್. ವಾಸುದೇವರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ನಾವು ಸಕಾರದ ಕಾನೂನುಕಟ್ಟಲೆಗಳನ್ನು ಗೌರವಿಸಬೇಕು. ಕೈಗಾರಿಕೆಗಳಿಗೆ ಟ್ರೇಡ್ ಲೈಸೆನ್ಸ್ನ್ನು ರದ್ದು ಮಾಡಿದ್ದು ನಾವು ವೃತ್ತಿ ತೆರಿಗೆಯನ್ನು ಕಟ್ಟುತ್ತಿರುವುದರಿಂದ ನಮಗೂ ರದ್ದುಮಾಡಬೇಕೆಂಬುದು ಸರ್ಕಾರಕ್ಕೆ ಮನವಿ ಮಾಡಿದರು. ಪ್ರತಿಯೊಬ್ಬರ ವ್ಯಾಪಾರದ ಗಾತ್ರ, ಸಿಬ್ಬಂದಿಗಳ ವಿವರ, ಹಣಕಾಸಿವ ವಹಿವಾಟುಗಳನ್ನು ಆದರಿಸಿ ಶುಲ್ಕ ದರ ನಿಗದಿಪಡಿಸಬೇಕು. ಅವೈಜ್ಞಾನಿಕವಾಗಿ ವಿಧಿಸಿರುವ ಶುಲ್ಕ್ಕವನ್ನು ಕೈಬಿಡಬೇಕೆಂದು ತಿಳಿಸಿದು. ಈ ಹಿಂದೆ ಉದ್ದಿಮೆ ಪರವಾನಿಗಿ ಪತ್ರ ಪಡೆಯುವುದು ತುಂಬಾ ಕ್ಲಿಷ್ಟವಾಗಿತ್ತು ಜಿಲ್ಲಾ ವಾಣಿಜ್ಯ ಸಂಘ ಹಾಗೂ ಹಲವಾರು ಸಂಘ-ಸAಸ್ಥೆಗಳ ಸಾಮಾಹಿಕ ಹೋರಾಟಗಳ ಫಲವಾಗಿ ಸರಳೀಕೃತಗೊಳಿಸಲಾಗಿದೆ.

ಅಕ್ಕಪಕ್ಕದ ಹಲವಾರು ಜಿಲ್ಲೆಗಳ ಮಾದರಿ ತರಿಸಿಕೊಂಡು ಅವುಗಳಿಗಿಂತ ಕಡಮೆ ದರ ನಿಗದಿಪಡಿಸಿ ಶಿವಮೊಗ್ಗ ನಗರದ್ದೇ ಅತೀ ಕಡಿಮೆ ಶುಲ್ಕವಾಗಿದೆ ಎಂದು ಮಾನ್ಯ ಆಯುಕ್ತರಾದ ಮಾಯಣ್ಣ ಗೌಡರು ತಿಳಿಸಿದರು. ಕೈಗಾರಿಕೆಗಳಿಗೆ ಸರ್ಕಾರ ಉದ್ದಿಮೆ ಪರವಾನಗಿ ರದ್ದುಮಾಡಿದೆ.
ಸದೃಡ ಸಮಾಜ ನಿರ್ಮಾಣ ಮಾಡುವಲ್ಲಿ ಉದ್ದಿಮೆದಾರರ ವರ್ತಕರ ಸಹಕಾರ ಅತೀ ಮುಖ್ಯ ಹಾಗೂ ಪ್ರತಿಯೊಬ್ಭರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ಉದ್ದಿಮೆದಾರರು, ವರ್ತಕರು ಪರವಾನಗಿ ಪಡೆಯುವುದಲ್ಲದೆ ತಮ್ಮ ಅಕ್ಕಪಕ್ಕದ ವ್ಯಾಪರಸ್ತರಿಗೆ ಮಾಹಿತಿ ನೀಡಿ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ನುಡಿದರು.
ಸಂಘದ ಅಧ್ಯಕ್ಷರು ಮಾತನಾಡಿ ಸರ್ಕಾರದ ಉದ್ದಿಮೆ ಪರವಾನಿಗಿಯನ್ನು ಪಡೆದುಕೊಳ್ಳಲು ಉದ್ದಿಮೆದಾರರಿಗೆ ಅನುಕೂಲವಾಗುವ ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿAದ ಇಂತಹ ಮೇಳವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿದ್ದು ಮಾನ್ಯ ಸದಸ್ಯರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮೇಳವನ್ನು ಆಯೋಜಿಸಲು ಸಹಕರಿಸಿದ ಮಹಾನಗರಪಾಲಿಕೆಯ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ತಿಳಿಸಿದರು. ಸರ್ಕಾರದ ತೆರಿಗೆಗಳನ್ನು ಶುಲ್ಕಗಳನ್ನು ಸಕಾಲದಲ್ಲಿ ಪಾವತಿಸುವುದು ನಾವು ದೇಶಕ್ಕೆ ಸೇವೆ ಸಲ್ಲಿಸಿದಂತೆ ಎಂದು ನುಡಿದರು.

ಈ ಎರಡು ದಿನಗಳ ಮೇಳದಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಮೂಲಭೂತ ಸೌಕರ್ಯ ಮತ್ತು ಗ್ರಿವೆನ್ಸ್ ಕಮಿಟಿ ಛರ‍್ಮನ್‌ರಾದ ಕೆ.ಎಸ್. ಸುಕುಮಾರ್ ನಿದೇಶಕರುಗಳಾದ ಇ. ಪರಮೇಶ್ವರ, ಪ್ರದೀಪ್ ವಿ. ಯಲಿ, ಸಂಯೋಜಿತ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಮಹಾನಗರಪಾಲಿಕೆಯ ಅಧಿಕಾರಿಗಳು, ಸಂಘದ ಸದಸ್ಯರು, ಸಿಬ್ಬಂದಿವರ್ಗದರು ಜನಸಾಮಾನ್ಯರು ಹಾಜರಿದ್ದರು. ಉಪಾಧ್ಯಕ್ಷ ಬಿ. ಗೋಪಿನಾಥ್ ಸ್ವಾಗತ ಕೋರಿದರು ಕಾರ್ಯದರ್ಶಿ ವಸಂತ್ ಹೋಬಳೀದಾರ್ ವಂದನಾರ್ಪಣೆ ಸಲ್ಲಿಸಿದರು.

ವರದಿ ಮಂಜುನಾಥ್ ಶೆಟ್ಟಿ…