ಶಿಕಾರಿಪುರ ನ್ಯೂಸ್…

ಶಿಕಾರಿಪುರ ತಾಲೂಕಿನ ಅರಿಷಿಣಗೆರೆ ಗ್ರಾಮ ಪಂಚಾಯತಿಯಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕೃಷಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಶಿಕಾರಿಪುರ ವತಿಯಿಂದ
130 ನಿವೇಶನ ರಹಿತರಿಗೆ ‘ಹಕ್ಕುಪತ್ರವನ್ನು ಸಂಸದರದ ಬಿ. ವೈ ರಾಘವೇಂದ್ರ ಅವರು ವಿತರಿಸಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WDC-2 ಯೋಜನೆಯಡಿ ತೋಟಗಾರಿಕೆ, ಅರಣ್ಯ ಸಸಿಗಳು, ತರಕಾರಿ ಕಿಟ್ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ ,ಶಿಕಾರಿಪುರ ತಾಲೂಕು ಬಿಜೆಪಿ ಅಧ್ಯಕ್ಷರು, ಅರಿಶಿಣಗೆರೆ ಗ್ರಾ.ಪಂ ಸದಸ್ಯರಾದ ವೀರೇಂದ್ರ ಪಾಟೀಲ್ ಅರಿಶಿಣಗೆರೆ ಗ್ರಾ.ಪಂ ಅಧ್ಯಕ್ಷರಾದ ಭಾಗ್ಯ ಪರಶುರಾಮ, ಉಪಾಧ್ಯಕ್ಷರಾದ ಗೋಪಾಲಪ್ಪ, ತಹಶೀಲ್ದಾರ್ ಕವಿರಾಜ್, ಕೃಷಿ ನಿರ್ದೇಶಕರಾದ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…