ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ವಜ್ರೇಶ್ವರಿ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮೇಶ್, ಉಪಾಧ್ಯಕ್ಷರಾಗಿ ಸಿ.ದಾನೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಶ್ರೀಕೃಷ್ಣ, ದೇವರಾಜ್, ಶ್ರೀನಿವಾಸ ವಿ., ಮಂಜಪ್ಪ, ಕೆ.ಆರ್. ಸುರೇಶ್, ಎಂ. ರಘುನಾಥ್, ರಾಜೇಶ್ ಟಿ., ಸವಿತಾ ಟಿ.ರವಿ, ಜಯಂತಿ ಮಿಲನ್ ಕುಮಾರ್ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಬಿ. ಮಂಜಪ್ಪ ಹೊಸದಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಪ್ರಮಾಣಪತ್ರ ನೀಡಿದರು.
ವಜ್ರೇಶ್ವರಿ ಕನ್ನಡ ಸಂಘವು ಹಲವು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಇದೀಗ ಸಂಘದ ಆಶ್ರಯದಲ್ಲಿ ಸಹಕಾರ ಸಂಘ ಸ್ಥಾಪನೆ ಮಾಡಲಾಗಿದೆ. ಸಹಕಾರ ಸಂಘವು ತನ್ನ ಷೇರುದಾರರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅಧ್ಯಕ್ಷ ಸೋಮೇಶ್ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…