SANDALWOOD NEWS…

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವು ವಿಶ್ವಾದ್ಯಂತ ತೆರೆ ಕಂಡಿದ್ದು ಚಿತ್ರಕ್ಕೆ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಬಂದಿದೆ. ಚಿತ್ರವನ್ನು ನೋಡಿ ಭಾವುಕರಾಗಿ ಎಷ್ಟೋ ಜನ ಕಣ್ಣೀರಿಟ್ಟಿದ್ದಾರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕೂಡ ಇದರ ಹೊರತಾಗಿಲ್ಲ.

ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕಾಳಜಿ ಹೊಂದಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಮುಖ್ಯಮಂತ್ರಿಗಳಿಗೆ ಸ್ಟೇಟ್ ಜಿಎಸ್ಟಿ ಕೈಬಿಡುವಂತೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ರವರು 6 ತಿಂಗಳವರೆಗೆ ಚಲನಚಿತ್ರದ ಮೇಲಿನ ಸ್ಟೇಟ್ಸ್ ಜಿಎಸ್ಟಿ ಗೆ ವಿನಾಯಿತಿ ಕೊಟ್ಟಿದ್ದಾರೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಸ್ವಲ್ಪ ನಿರಾಳ ಎನಿಸಿದೆ.

ರಕ್ಷಿತ್ ಶೆಟ್ಟಿ ರವರ ಈ ನಡೆಯನ್ನು ಚಿತ್ರರಂಗದ ಹೆಸರಾಂತ ನಿರ್ಮಾಪಕರು ನಿರ್ದೇಶಕರು ಪ್ರಶಂಸಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…