ಕನಕಪುರ ನ್ಯೂಸ್…

ಅಖಿಲ ಭಾರತ ವೀರಶೈವ ಮಹಾಸಭಾ ( ರಿ ) ರಾಜ್ಯ ಘಟಕದ ವತಿಯಿಂದ ಪ್ರತಿವರ್ಷದಂತೆ 2021 – 22 ನೇ ಸಾಲಿನ ಎಸ್. ಎಸ್. ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇಕಡ 90 ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಈ ವೆಬ್ಸೈಟ್ ನಲ್ಲಿ ಈ ಕೆಳಗಿನ ಆನ್ಲೈನ್ ಲಿಂಕ್ ನಲ್ಲಿ
www.veerashaivamahasabha.in
ಅರ್ಜಿ ಸಲ್ಲಿಸಲು ಮನವಿ ಮಾಡಲಾಗಿದೆ ಎಂದು ಕನಕಪುರ ತಾಲ್ಲೂಕು ವೀರಶೈವ ಮಹಾಸಭದ ಅಧ್ಯಕ್ಷ ಸಾಂಬಶಿವನ್ ತಿಳಿಸಿದರು ಈ ಅರ್ಜಿ ಸಲ್ಲಿಸಲು 07-07-2022 ರಿಂದ 20-07-2022 ವರೆಗೆ ಸೀಮಿತವಾದ ಸಮಯ ನಿಗದಿಪಡಿಸಲಾಗಿದೆ.

ಕನಕಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜ ಬಾಂಧವರು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ
ಅರ್ಜಿಯ ಒಂದು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡು ಇನ್ನೊಂದು ಪ್ರತಿಯನ್ನು ಕನಕಪುರ ತಾಲೂಕು ಘಟಕದ ಮಾಹಿತಿಗಾಗಿ ನೀಡಬೇಕೆಂದು
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಗಣೇಶ ರವರು ತಿಳಿಸಿದರು ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ಸತೀಶ್ ಖಜಾಂಚಿ ಪರಮೇಶ್ ನಿರ್ದೇಶಕರಾದ ದರ್ಶನ್ ನಿರಂಜನ್ ಪಟೇಲ್ ಶಿವಕುಮಾರ್ ನಟರಾಜ್ ಹರೀಶ್ ಶಾಂತಕುಮಾರ್ ಮಹೇಶ್ ವೀರೆಶ್ ಭರತ್ ಪೋಲಿಸ್ ಉಪಸ್ಥಿತರಿದ್ದರು.

ಕಚೇರಿ ವಿಳಾಸ ಶ್ರೀ ವೀರಶೈವ ಲಿಂಗಾಯತ ಮಹಾಸಭಾ ( ರಿ ) ಕನಕಪುರ ತಾಲ್ಲೂಕು ಘಟಕ
ಶ್ರೀ ದೇಗುಲಮಠ ಕನಕಪುರ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಸಂಪರ್ಕಿಸಿ ಗಣೇಶ – 9886908142

ವರದಿ ಮಂಜುನಾಥ್ ಶೆಟ್ಟಿ…