ಕೊರೋನಾದಿಂದಾಗಿ ಜನರೆಲ್ಲರೂ ಮಾಸ್ಕ್ ಧರಿಸಿ ಓಡಾಡುವಂತಾಗಿದೆ. ಮಾಸ್ಕ್ ಸ್ಯಾನಿಟೈಸರ್ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಮನುಷ್ಯನಿಗೆ ಮರೆವು ಸಹಜ. ಪೊಲೀಸ್ ಇನ್ಸ್ ಪೆಕ್ಟರ್ ಎಲ್ ವೈ ರಾಜೇಶ್ ರವರು Thread for nation ಎಂಬ ಅಭಿಯಾನವನ್ನು ಶುರು ಮಾಡಿದ್ದು . ಎಲ್ಲರೂ ತಮ್ಮ ಕೈಗಳಿಗೆ ಕಪ್ಪು ದಾರವನ್ನು ಕಟ್ಟುವುದರ ಮುಖಾಂತರ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಇದರ ಸದುದ್ದೇಶವೇ ಅಷ್ಟೆ ನಿಮ್ಮ ಕೈಯಲ್ಲಿರುವ ದಾರ ನೋಡಿದಾಗಲೆಲ್ಲ ನಿಮಗೆ ಮಾಸ್ಕ್ ಸ್ಯಾನಿಟೈಸರ್ ಹಾಗೂ ಕರೋನ ಬಗೆಗಿನ ನೆನಪು ಉಂಟು ಮಾಡುವುದು. ಹಾಗೆಯೇ ಜಯಕರ್ನಾಟಕ ರಾಜ್ಯಾಧ್ಯಕ್ಷ ರಾದ ಬಿ ಎನ್ ಜಗದೀಶ್ ಅವರು ಎಲ್ಲಾ ಜಯಕರ್ನಾಟಕ ಪದಾಧಿಕಾರಿಗಳಿಗೆ ಹಾಗೂ ರಾಜ್ಯದ ಜನತೆಗೆ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153