ಶಿವಮೊಗ್ಗ: ರಾಗಿಗುಡ್ಡ ಬಡಾವಣೆಯಲ್ಲಿ ಶನಿವಾರ ಮುಂಜಾನೆ ಮನೆಯೊಂದರ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ.ಭವಾನಿರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಭಾರೀ ಮಳೆಯಿಂದಾಗಿ ತೇವಗೊಂಡಿದ್ದ ಮನೆ ಗೋಡೆ ಬೆಳಗಿನ 3 ಗಂಟೆ ವೇಳೆಗೆ ಕುಸಿದು ಅವಘಡ ಸಂಭವಿಸಿದೆ. ಮನೆಯ ಹಾಲ್ ನಲ್ಲಿ ಮಲಗಿದ್ದ ಕುಟುಂಬದ ಸದಸ್ಯರು ಬಿದ್ದ ಗೋಡೆಯ ಅವಶೇಷಗಳಡಿ ಸಿಲುಕಿದ್ದಾರೆ.

ತಕ್ಷಣವೇ ಸ್ಥಳೀಯ ನಿವಾಸಿಗಳು ಹರಸಾಹಸ ನಡೆಸಿ ಕುಟುಂಬದವರನ್ನು ರಕ್ಷಿಸಿದ್ದು, ಘಟನೆಯಲ್ಲಿ ಮನೆಯ ಮಾಲೀಕ ಯತಿರಾಜ್ ಗೂ ಗಾಯಗಳಾಗಿವೆ. ಉಮಾ ಅವರಿಗೆ ಕೈಕಾಲು ಹಾಗೂ ಸೊಂಟಕ್ಕೆ ಪೆಟ್ಟಾಗಿದೆ. ಕಾವ್ಯಾಗೆ ಭುಜದ ಮೂಳೆ ಮುರಿದಿದೆ. ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಉಪಮೇಯರ್ ಶಂಕರ್ ಗನ್ನಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ವರದಿ ಮಂಜುನಾಥ್ ಶೆಟ್ಟಿ…