ಶಿವಮೊಗ್ಗ ನಗರದ ಬಸವನಗುಡಿ 3 ನೇ ತಿರುವು ಶ್ರೀ ದುರ್ಗಾ ಭವಾನಿ ಮಂದಿರದಲ್ಲಿ 27ನೇ ವರ್ಷದ ಶ್ರೀ ಚಾಮುಂಡೇಶ್ವರಿ ಜನ್ಮ ದಿನದ ಅಂಗವಾಗಿ ವಿಶೇಷ ಪೂಜೆ ಮಾಡಲಾಯಿತು.

ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಎಂ.ವಿಜಯಲಕ್ಷ್ಮಿ ಹಾಗೂ ಎಂ ರವಿ ಪ್ರಸಾದ್ ಪ್ರಧಾನ ಅರ್ಚಕರು ವ್ಯವಸ್ಥೆಯನ್ನು ಮಾಡಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…