ಶಿವಮೊಗ್ಗ ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‍ನ (ಮುಖ್ಯ ಕಛೇರಿ) ವತಿಯಿಂದ ನಿವೃತ್ತ ಕರ್ನಲ್ ಆನಂದ್ ರಾವ್ ರವರನ್ನು ಎಪ್ಪತೈದನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಯುತ ಕರ್ನಲ್ ರಾವ್ ರವರು ಅಂದಿನ ಸ್ವಾತಂತ್ರ್ಯದ ದಿನಗಳು ಮತ್ತು ದೇಶದ ವಿಭಜನೆಗಳು ನಿರಾಶ್ರಿತರ ಪಾಡುಗಳು ಆಂತರಿಕವಾದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಹಾಗೆಯೇ ದೇಶ ಸ್ವಾತಂತ್ರ್ಯ ಸಿಕ್ಕಾಗಿನಿಂದ ಇಲ್ಲಿಯವರೆಗೂ ದೇಶ ನಡೆದುಬಂದ ಹಾದಿಗಳನ್ನ ನೆನೆದು ಇಂದಿನ ಯುವ ಜನತೆಗೆ ಹಲವು ಕಿವಿಮಾತುಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ದೇಶಭಕ್ತಿಗೀತೆಗಳನ್ನ ಹಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ನಮ್ಮ ಪೂರ್ವಿಕರು ಮತ್ತು ದೇಶದ ಯೋಧರನ್ನು ಸ್ಮರಿಸಿಕೊಂಡು ಅವರಿಗಾಗಿ ನುಡಿ ನಮನಗಳನ್ನು ಸಲ್ಲಿಲಾಯಿತು.

ನಂತರ ನೆರೆದಿದ್ದವರಿಗೆಲ್ಲರಿಗೂ ಸಿಹಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ರೀಜ಼ನಲ್ ಮ್ಯಾನೇಜರ್ ಶ್ರೀಯುತ ಶ್ರೀಜಿತ್ ವಿ.ಕೆ ರವರು ಶಾಖಾ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಪುಷ್ಪಲತಾ ಕೆ ರವರು. ಬ್ಯಾಂಕ್‍ನ ಪದಾಧಿಕಾರಿಗಳಾದ ಶ್ರೀಯುತ ಮಹಬಲೇಶ್ವರ ಹೆಗಡೆಯವರು ಶ್ರೀಯುತ ಪುನೀತ್ ಕುಮಾರ್ ರವರು ಶ್ರೀಯುತ ದೇವರಾಜ್ ಕೆ.ಟಿ ರವರು ಕಾರ್ಯಕ್ರಮಗಳ ಮೇಲುಸ್ತುವಾರಿ ವಹಿಸಿದ್ದರು. ಮತ್ತು ಶಿವಮೊಗ್ಗ ವಲಯದ ಭಾರತೀಯ ಸ್ಟೇಟ್ ಬ್ಯಾಂಕ್‍ಗಳ ಎಲ್ಲಾ ಸಿಬ್ಬಂದಿವರ್ಗದವರು ಹಾಜರಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…