ಶಿರಾಳಕೊಪ್ಪ ನ್ಯೂಸ್…

ಶಿರಾಳಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯ ತೊಗರ್ಸಿ ಗ್ರಾಮದ ವಾಸಿಯೊಬ್ಬರು ಮನೆಯಲ್ಲಿ ಯಾರು ಇಲ್ಲದೆ ವೇಳೆಯಲ್ಲಿ ಕಳ್ಳರು ಕೈಚಳಕವನ್ನು ತೋರಿಸಿದ್ದಾರೆ.ಗಾಡ್ರೇಜ್‌ ಬೀರುವಿನಲ್ಲಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದಾರೆ.

ಮನೆಯವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0149/2022 ಕಲಂ 454, 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪಿಎಸ್‌ಐ ಶಿರಾಳಕೊಪ್ಪ ಪೊಲೀಸ್‌ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕಃ- 20-08-2022 ರಂದು ಪ್ರಕರಣದ ಆರೋಪಿತರಾದ ಚಿನ್ನ ಸ್ವಾಮಿ, 50 ವರ್ಷ, ದಾಸರ ಕಾಲೋನಿ ಶಿರಾಳಕೊಪ್ಪ ಟೌನ್‌ ಮತ್ತು ಕುಮಾರ ಬಿ ಆರ್‌, 42 ವರ್ಷ, ಮಹಾದೇವಯ್ಯ ಬಡಾವಣೆ, ಶಿರಾಳಕೊಪ್ಪ ಟೌನ್‌ ರವರುಗಳನ್ನು ವಶಕ್ಕೆ ಪಡೆದು, ಆರೋಪಿತರಿಂದ ಶಿರಾಳಕೊಪ್ಪ ಪೊಲೀಸ್‌ ಠಾಣೆಯ 12 ಮತ್ತು ಸೊರಬ ಪೊಲೀಸ್‌ ಠಾಣೆಯ 02 ಪ್ರಕರಣಗಳು ಸೇರಿ ಒಟ್ಟು 14 ಮನೆಗಳ್ಳತನ ಪ್ರಕರಣಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಅಂದಾಜು ಮೌಲ್ಯ 21,02,700/- ರೂಗಳ 504 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಅಂದಾಜು ಮೌಲ್ಯ 75,100/- ರೂಗಳ ಒಟ್ಟು 1 ಕೆಜಿ 130 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹಾಗೂ 01 ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್‌ ಮತ್ತು ಕೃತ್ಯಕ್ಕೆ ಉಪಯೋಗಿಸಿದ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ವರದಿ ಪ್ರಜಾಶಕ್ತಿ…