ವಸತಿ ಸೌಲಭ್ಯಕ್ಕೆ ಮನವಿ: ನಿಗಮದ ವತಿಯಿಂದ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ದಮನಿತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಜಾಗ ನೀಡುವಂತೆ ಮನವಿ ಮಾಡಿದ್ದೇನೆ .ಶಿವಮೊಗ್ಗದ ಜಿಲ್ಲಾಧಿಕಾರಿಗಳು ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು 5 ಎಕರೆ ಜಾಗ ನೀಡಲು ಒಪ್ಪಿದ್ದಾರೆ .
ಶಿವಮೊಗ್ಗ ನಗರದಲ್ಲಿ ಸುಮಾರು 300 ದಮನಿತ ಮಹಿಳೆಯರು ಮತ್ತು 600 ಅಂಗತ್ವ ಅಲ್ಪಸಂಖ್ಯಾತರಿದ್ದು , ಇವರು ಸ್ವಾವಲಂಬಿಗಳಾಗಿ ಮತ್ತು ಗೌರವಯುತವಾಗಿ ಜೀವಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು , ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಮಾಡದಂತೆ ಮನವಿ ಮಾಡುತ್ತೇನೆ ಎಂದರು.ನಿಗಮದ ವಿವಿಧ ಯೋಜನೆಗಳಾದ ಉದ್ಯೋಗಿನಿ , ಕಿರುಸಾಲ , ಸಮೃದ್ಧಿ , ಪ.ಜಾತಿ / ಪ.ಪಂ ಉಪಯೋಜನೆಗಳು , ಧನುಶ್ರೀ , ಚೇತನ , ಲಿಂಗತ್ವ ಅಲ್ಪಸಂಖ್ಯಾತರ ಪುನರ್ವ ಸತಿ ಯೋಜನೆಗಳು ಒಳಗೊಂಡಂತೆ ದಮನಿತ / ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಗೆ ಅನುಕೂಲವಾಗುವಂತಹ ಇತರ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು .

ಘಟಕ ಸ್ಥಾಪನೆಗೆ ಧನಸಹಾಯ : ರಾಯಚೂರು , ಹೊಸಪೇಟೆ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಒಟ್ಟಾಗಿ ಉತ್ಪಾದಕ ಘಟಕಗಳನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ . ಹೊಸಪೇಟೆಯಲ್ಲಿ ಸ್ಥಾಪಿಸಲಾಗಿರುವ ಶೇಂಗಾ ಚಕ್ಕಿ ಘಟಕ ಅತ್ಯಂತ ಯಶಸ್ವಿಯಾಗಿದೆ .ಇದೇ ರೀತಿ ನೀವು ಯಾವುದಾದರು ಘಟಕ ಸ್ಥಾಪಿಸಲು ಮುಂದಾದಲ್ಲಿ ನಿಗಮ ಆರ್ಥಿಕ ಸೌಲಭ್ಯ ನೀಡಲು ಸಿದ್ಧವಾಗಿದೆ .ಹಾಗೂ ಘಟಕ ಸ್ಥಾಪನೆ ಬಗ್ಗೆ ತರಬೇತಿ ಸಹ ನೀಡಲಾಗುವುದು ಎಂದರು .15 ರಿಂದ 20 ಜನ ಸಂಘಟಿತರಾಗಿ ದೃಢ ಮನಸ್ಸು ಮಾಡಿ ಮುಂದೆ ಬಂದರೆ ತರಬೇತಿ ಜತೆಗೆ ಘಟಕ ಸ್ಥಾಪಿಸಲು ಸಹಕಾರ ನೀಡಲಾಗುವುದು ಎಂದರು.ಹಾಗೂ ಪ್ರತಿ ಜಿಲ್ಲೆಗಳಲ್ಲಿ ನಿಗಮದ ವತಿಯಿಂದ ಒಂದೊಂದು ಸ್ವ ಸಹಾಯ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು , ಇದನ್ನು ಸಹ ಸಕಾರಗೊಳಿಸಲು ಲಿಂಗತ್ವ ಅಲ್ಪಸಂಖ್ಯಾತರು , ದಮನಿತ ಮಹಿಳೆಯರು , ಮಾಜಿ ದೇವದಾಸಿಯರು ಸಂಘಟಿತರಾಗಿ ಮುಂದೆ ಬರಬೇಕೆಂದರು.

CCTV SALES & SERVICE

9880074684

ಆನ್ ಲೈನ್ ಅರ್ಜಿ : ನಿಗಮದ ವಿವಿಧ ಯೋಜನೆಗಳಡಿ ಸಾಲ ಪಡೆದಿರುವವರು ಸಾಲವನ್ನು ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಸಕಾಲದಲ್ಲಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಬೇಕು .ಆಗ ಬ್ಯಾಂಕ್ ನವರು ಕೂಡ ಉತ್ತಮವಾಗಿ ಸಹಕರಿಸುತ್ತಾರೆ .ಕಿರುಸಾಲ ಪಡೆದು ಬಹುತೇಕ ಫಲಾನುಭವಿಗಳು ಸರಿಯಾಗಿ ಸಾಲ ಮರುಪಾವತಿ ಮಾಡಿರುತ್ತಾರೆ .ತಾಲ್ಲೂಕುಗಳ ಸಿಡಿಪಿಒ ಗಳು ಹೀಗೆ ಮರುಪಾವತಿ ಮಾಡಿದ ಮೇಲೆ ಮತ್ತೆ ಸಾಲದ ಅವಶ್ಯಕತೆಯಿದ್ದರೆ ಸಹಕರಿಸಬೇಕು .ಹಾಗೂ ಅವಶ್ಯಕತೆ ಇರುವವರಿಗೆ ಸಾಲ ದೊರಕಬೇಕೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲಾಗುವುದು ಎಂದರು .

ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಸಹಕಾರವೂ ಇದ್ದು ಶಾಸಕರಿಂದ ನಿಗದಿತ ಅವಧಿಯಲ್ಲಿ ಫಲಾನುಭವಿಗಳ ಆಯ್ಕೆಯ ಅನುಮೋದನೆ ಪಡೆದುಕೊಂಡು ಆಯಾ ಸಾಲಿನಲ್ಲೇ ಸೌಲಭ್ಯ ಸಿಗುವಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು .ಅಧಿಕಾರಿ ಸುರೇಶ್ ಮಾತನಾಡಿ ಮಹಿಳಾ ಅಭಿವೃದ್ಧಿ ನಿಗದಮ ವಿವಿಧ ಯೋಜನೆಗಳ ಕುರಿತು ಪ್ರಗತಿ ವರದಿ ಸಲ್ಲಿಸಿದರು .ತಾಲ್ಲೂಕುಗಳ ಸಿಡಿಪಿಒಗಳು ತಾಲೂಕುಗಳ ಪ್ರಗತಿ ವರದಿ ಸಲ್ಲಿಸಿದರು . ಅದೇ ಸಂದರ್ಭದಲ್ಲಿ ಅಧ್ಯಕ್ಷರು ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದಮನಿತ ಮಹಿಳೆಯರಿಗೆ ಸಾಲ ಸೌಲಭ್ಯ ಪ್ರಮಾಣಪತ್ರ ವಿತರಿಸಿದರು . ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ , ಉಪ ಕಾರ್ಯದರ್ಶಿ ಜಯಲಕ್ಷ್ಮಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುರೇಶ್ .ಜಿ , ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಎಂ.ಡಿ ಸೇರಿದಂತೆ ವಿವಿಧ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153