ಶಿಕಾರಿಪುರ ತಾಲೂಕು ಕಾಂಗ್ರೆಸ್ ವತಿಯಿಂದ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ನಿಕಟ ಪೂರ್ವ ಅಭ್ಯರ್ಥಿಗಳು ಶಿಕಾರಿಪುರ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಣಿ ಮಾಲತೇಶ್ ಅಣ್ಣನವರ ನೇತೃತ್ವದಲ್ಲಿ,ಪ್ರಾಥಮಿಕ ಕೇಂದ್ರಗಳಲ್ಲಿ ಇದುವರೆಗೂ ನೀಡುತ್ತಿದ್ದ 45 ವರ್ಷದ ಮೇಲ್ಪಟ್ಟವರಿಗೆ ನೀಡುತ್ತಿದ್ದ ಲಸಿಕೆಯನ್ನು ನಿಲ್ಲಿಸಿರುವುದನ್ನು ಖಂಡಿಸಿ ತಾಲೂಕು ಆರೋಗ್ಯಧಿಕಾರಿಗಳ (THO) ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿದರು. ಎಲ್ಲಾ ವಯೋಮಾನದವರಿಗೂ ಪ್ರತಿನಿತ್ಯವೂ ಲಸಿಕೆ ನೀಡಬೇಕೆಂದು ಒತ್ತಾಯಿಸಿದರು. ಇಷ್ಟರಲ್ಲಿ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸಬೇಕಾಗಿತ್ತು,ಆದರೇ ಈ ಕಾರ್ಯ ಮುಗಿಯದೇ ಇರುವುದು ಆತಂಕಕಾರಿಯಾಗಿದ್ದು ಮೂರನೇ ಅಲೆ ವಕ್ಕರಿಸಿದರೆ ದೊಡ್ಡ ಅನಾಹುತವೇ ಜರುಗಲಿದ್ದು ಕೂಡಲೇ ದೇಶದ ಎಲ್ಲಾ ವಯೋಮಾನದ ಎಲ್ಲಾ ಜನರಿಗೂ ಲಸಿಕೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಭಂಡಾರಿ ಮಾಲತೇಶ್ ರವರು* ಶಿಕಾರಿಪುರ ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷರಾದ #ಮಲ್ಲಿಕ್ ನಾಯ್ಕ್ ರವರು ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರಾದ ಸುರೇಶ್ ಕಲ್ಮನೆ ರವರು ತಾಲೂಕು ಎನ್ ಎಸ್ ಯು ಐ ನ ಅದ್ಯಕ್ಷರಾದ ಶಿವು ಹುಲ್ಮಾರ್ ಯುವ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ನಾಯ್ಕ್ ಅರುಣನಾಯ್ಕ್ ನಾಗರಾಜ್ ನಾಯ್ಕ್ ರವರು ಹಾಗೂ ಮುಂತಾದ ಮುಖಂಡರು ಭಾಗವಹಿಸಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153