ಬ್ಯಾಂಕ್ ಆಫ್ ಬರೋಡ ಉದ್ಯೋಗಿಗಳ ಸಂಘದ (ಬಿಓಬಿಇಎಸ್) ಉಡುಪಿ-2ರ ಖಜಾಂಚಿ ಮಂಜುನಾಥ ಶೆಟ್ಟಿ ಅವರು 38 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಬ್ಯಾಂಕ್ ಆಫ್ ಶಿವಮೊಗ್ಗ ಎಲ್ ಬಿಎಸ್ ಶಾಖಾ ಕಚೇರಿಯಲ್ಲಿ ಬುಧವಾರ ನಡೆಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ ಶೆಟ್ಟಿ ಅವರು, ಬಡತನದಿಂದಲೇ ಬೆಳೆದು ಬಂದ ನನಗೆ ಉದ್ಯೋಗ ನೀಡಿ ಬೆಳೆಸಿದ ಸಂಸ್ಥೆ ಬ್ಯಾಂಕ್ ಇದು. ವಿಜಯ ಬ್ಯಾಂಕ್ ನಲ್ಲಿ ಆರಂಭದಲ್ಲಿ ಸಣ್ಣ ಸಣ್ಣ ಹುದ್ದೆಗಳನ್ನು ಅಲಂಕರಿಸಿ, ಸುದೀರ್ಘ ವರ್ಷಗಳಲ್ಲಿ ಬೆಳೆದು ಬಂದವನು ನಾನು. ಬ್ಯಾಂಕ್ ಆಫ್ ಬರೋಡವಾಗಿ ಬ್ಯಾಂಕ್ ಮರು ನಾಮಕರಣಗೊಂಡ ಮೇಲೆಯೂ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಭಾಗ್ಯ ನನ್ನದಾಗಿದೆ. ಇಲ್ಲಿನ ಅಧಿಕಾರಿಗಳು, ಸಿಬಂದಿ ವರ್ಗದ ಪ್ರೋತ್ಸಾಹ, ಸ್ನೇಹಪರ ವ್ಯಕ್ತಿತ್ವಕ್ಕೆ ನಾನು ಅಭಾರಿ ಎಂದರು. ಬಿಓಬಿ. ಎಸ್.ಆರ್. ರೋಡ್ ಶಾಖೆಯ ಮುಖ್ಯ ವ್ಯವಸ್ಥಾಪಕ ಯೋಗೀಶ್, ಬಿ.ಎಚ್. ರೋಡ್ ಶಾಖೆಯ ಮುಖ್ಯ ವ್ಯವಸ್ಥಾಪಕ ನವೀನ್ ಚಂದ್ರ, ಬಿಓಬಿ ಶಿವಮೊಗ್ಗ ಬಸ್ ಸ್ಟ್ಯಾಂಡ್ ಶಾಖೆಯ ವ್ಯವಸ್ಥಾಪಕ ಸಂಗೇಶ್ ಚೌಹಾಣ್, ವಿನೋಬನಗರ ಶಾಖಾ ವ್ಯವಸ್ಥಾಪಕ ಯತೀಶ್, ಬಿಓಬಿಇಎಸ್ ಅಖಿಲ ಭಾರತೀಯ ಉಪಾಧ್ಯಕ್ಷ ಮುರುಗೇಂದ್ರಪ್ಪ, ಬಿಓಬಿಇಎಸ್ ಉಡುಪಿ 1&2ರ ಅಧ್ಯಕ್ಷ ಸುರೇಶ್ ಶೆಟ್ಟಿ, ಬಿಓಬಿಇಎಸ್.ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಲವಕುಮಾರ್, ಎಲ್ ಬಿಎಸ್ ಶಾಖಾ ವ್ಯವಸ್ಥಾಪಕ ಪಿ. ಶಿವಕುಮಾರ್, ಎಲ್ ಬಿ ಎಸ್ ಶಾಖೆಯ ಸಿಬಂದಿ, ಗ್ರಾಹಕರು, ಸನಿಹದ ಬ್ರಾಂಚ್ ನ ಅಧಿಕಾರಿ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು. ಶಾಖೆಯ ಸಿಬಂದಿಗಳು ಮಂಜುನಾಥ ಶೆಟ್ಟಿ ಅವರೊಂದಿಗಿನ ಒಡನಾಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153