ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ರವರು ತುಂಬಾ ಪ್ರಮುಖವಾದ ಸಮಸ್ಯೆ ಒಂದನ್ನು ಸಭೆಯ ಮುಂದಿಟ್ಟರು . ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ಕೊರತೆಯಿಂದಾಗಿ ಪೇಷೆಂಟ್ ಗಳನ್ನು ನೋಡಿಕೊಳ್ಳಲು ಅವರ ಕುಟುಂಬಸ್ಥರಿಗೆ ಅನುವು ಮಾಡಿಕೊಡಲಾಗುತ್ತಿದೆ. ಹಾಗೆ ನೋಡಿಕೊಂಡ ಕೇರ್ ಟೇಕರ್ ಹೊರಗೆ ಬಂದು ಮನೆಗೆ ಹೋಗಿ ಮತ್ತೆ ಬರುತ್ತಾರೆ . ಆಸ್ಪತ್ರೆಯಿಂದ ಹೊರ ಹೋದ ಮೇಲೆ ಅವರು ಎಲ್ಲೆಲ್ಲಿ ತಿರುಗುತ್ತಾರೆ ಹಾಗೂ ಮನೆಯಲ್ಲಿ ಇತರ ಕುಟುಂಬಸ್ಥರಿಗೆ ಸೋಂಕು ತಗಲುವ ಸಾಧ್ಯತೆ ತುಂಬಾ ಹೆಚ್ಚಿದೆ. ಆದ್ದರಿಂದ ಈ ಕೂಡಲೇ ಅಗತ್ಯ ಸ್ಟಾಫ್ ಗಳನ್ನು ತೆಗೆದುಕೊಂಡು ಕುಟುಂಬಸ್ಥರಿಗೆ ಒಳಗೆ ಬಿಡುವ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಹೇಳಿದರು . ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ರವರು ನ ಒಬ್ಬ ಜನ ಚುನಾಯಿತ ಪ್ರತಿನಿಧಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುದಾನ ಕೊಡುವ ತನಕ ಕಾಯುವ ಪರಿಸ್ಥಿತಿ ಇಲ್ಲ . ಹಾಗಾಗಿ ಜಿಲ್ಲಾಧಿಕಾರಿಗಳು ಈ ತಕ್ಷಣವೇ ಸ್ಟಾಫ್ ಕೆಲಸಕ್ಕೆ ತೆಗೆದುಕೊಳ್ಳಲು ಶುರು ಮಾಡಿ. ಅದಕ್ಕೆ ಬೇಕಾದ ಹಣದ ವ್ಯವಸ್ಥೆಯನ್ನು ನಮಗೆ ಬಿಡಿ . ಆದರೆ ಈಗ ನಮಗೆ ಜನರ ಆರೋಗ್ಯವೇ ಆದ್ಯತೆ . 2 ಅಥವಾ 3 ದಿನದೊಳಗಾಗಿ ಸ್ಟಾಫ್ ಸಮಸ್ಯೆ ಬಗೆಹರಿಸುವಂತೆ ಹೇಳಿದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ