ಶಿವಮೊಗ್ಗ: ಗುಜರಾತ್ ರಾಜ್ಯದ ವಡೋದರ ದಲ್ಲಿರುವ, ವಡೋದರ ಹೋಂ ಸ್ಕೂಲ್ ಸಂಸ್ಕೃತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇಂದು ಸಂಸ್ಕೃತ ಭವನಕ್ಕೆ ಆಗಮಿಸಿ, ಸಂಸ್ಕೃತ ಕಲಿಕೆಯ ಮಹತ್ವ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಯೋಜನೆಯ ರಾಜ್ಯಾಧ್ಯಕ್ಷ ಎಸ್.ಕೆ.ಶೇಷಾಚಲ, ವಾಸವಿ ಅಕಾಡೆಮಿ ಅಧ್ಯಕ್ಷ ಶಾಮಸುಂದರ್, ಸಂಸ್ಕೃತ ಶಿಕ್ಷಕ ಅ.ನಾ.ಶ್ರೀವತ್ಸ, ವಾಸವಿ ಅಕಾಡೆಮಿ ಟ್ರಸ್ಟ್ ಸದಸ್ಯ ಎಸ್.ಎಸ್.ವಾಗೇಶ್ ಉಪಸ್ಥಿತರಿದ್ದರು. ವಡೋದರ ಶಾಲಾ ಪರವಾಗಿ ಮೇಘನ, ದಿವ್ಯಾಂಗ ಕಪಾಡಿಯ ಇನ್ನು ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…