ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಯುತ ನಾಗರಾಜ್ ಕಂಕಾರಿ ರವರು ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ವಕ್ತಾರರಾಗಿ ಪಾಲಾಕ್ಷಿ ರವರು ಆಯ್ಕೆಯಾಗಿದ್ದಾರೆ. ರಾಜ್ಯದ್ಯಕ್ಷರದ ಸಿ ಎಂ ಇಬ್ರಾಹಿಂ ರವರು ಇಬ್ಬರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನೂತನ ರಾಜ್ಯ ಕಾರ್ಯದರ್ಶಿ ನಾಗರಾಜ್ ಕಂಕಾರಿ ಮತ್ತು ಜಿಲ್ಲಾ ವಕ್ತಾರ ಪಾಲಾಕ್ಷಿ ರವರಿಗೆ ಸನ್ಮಾನ ಮಾಡಿ ಅಭಿನಂದಿಸಿದರು. ಜೆಡಿಎಸ್ ರಾಜ್ಯ ವಕ್ತಾರ ಶ್ರೀಯುತ ಎಂ ಶ್ರೀಕಾಂತ್ ರವರು ಇಬ್ಬರು ನಾಯಕರಿಗೆ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಭಾಸ್ಕರ್ , ಬಸವರಾಜು , ನರಸಿಂಹ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…