ನಾನು ಗೃಹಿಣಿಯಾಗಿದ್ದು ತುಂಬಾ ಕಡುಬಡವರಾಗಿರುತ್ತೇವೆ ನನ್ನ ಮಗನಾದ ಸುಮಾರು 6ನವರ್ಷದ ಲೋಹಿತ್ ಎನ್ ಇವನಿಗೆ ಕ್ಯಾನ್ಸರ್ ಪೀಡಿತನಾಗಿದ್ದು ತುರ್ತು ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇರುತ್ತದೆ ಸರ್ಕಾರದ ಆಯುಷ್ಮಾನ್ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ನನ್ನ ಪಡಿತರ ಚೀಟಿಯಲ್ಲಿ ನನ್ನ ಮಗನ ಹೆಸರು ನೊಂದಾವಣೆಯಾಗಿರುವುದಿಲ್ಲ . ಮಣಿಪಾಲಿನ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸುಮಾರು 7.00ಲಕ್ಷ ರೂಪಾಯಿಗಳು ಖರ್ಚಾಗುತ್ತದೆ ಎಂದು ತಿಳಿಸಿರುತ್ತಾರೆ.
ಸರ್ಕಾರದ ಆಯುಷ್ಮಾನ್ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಲು ನನ್ನ ಪಡಿತರ ಚೀಟಿಯಲ್ಲಿ ನನ್ನ ಮಗನ ಹೆಸರನ್ನು ನೋಂದಣಿ ಮಾಡಿದ್ದಲ್ಲಿ ಸಂಪೂರ್ಣ ಶಸ್ತ್ರ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಲಿದೆ.ನಾನು ತೀರ್ವ ಸಂಕಷ್ಟದಲ್ಲಿದ್ದು ಜೀವನ ನಡೆಸಲು ತುಂಬಾ ಕಷ್ಟಕರವಾದವಾಗಿರುವುದರಿಂದ,ದಯಮಾಡಿ ನನ್ನ ಮಗನ ಹೆಸರನ್ನು ಪಡಿತರ ಚೀಟಿಯಲ್ಲಿ ನೋಂದಣಿ ಮಾಡಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ . ನಾಗರಿಕ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಪಡಿತರ ಚೀಟಿಯಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಯು ಲಾಕ್ ಆಗಿದೆ ಎಂದು ತಿಳಿಸಿರುತ್ತಾರೆ. ಆದ್ದರಿಂದ ದಯಮಾಡಿ ನಾಗರಿಕ ಆಹಾರ ಮತ್ತು ಸರಬರಾಜು ಇಲಾಖೆಗೆ ಪಡಿತರ ಚೀಟಿಯಲ್ಲಿ ನನ್ನ ಮಗನಾದ ಲೋಹಿತ್ ಎಂಬ ಹೆಸರು ನೋಂದಣಿ ಮಾಡುವಂತೆ ಆದೇಶ ಮಾಡಿ ನವೀಕರಣಗೊಂಡ ಪಡಿತರ ಚೀಟಿಯನ್ನು ನೀಡಬೇಕು ಈ ಮೂಲಕ ವಿನಂತಿಸಿದರು.
ಈ ಸಂದರ್ಭದಲ್ಲಿ ಇಂದುಮತಿ N ,ಕೆ ರಂಗನಾಥ್, ಪ್ರವೀಣ್ ಕುಮಾರ್ , H P ಗಿರೀಶ್ ಕುಮಾರೇಶ್ , S ರಾಘವೇಂದ್ರ ,ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153