ಶಿಕಾರಿಪುರ ನ್ಯೂಸ್…

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4 ಮೊತ್ತ ರೂ. 850.00 ಲಕ್ಷಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ ಅವರು, ಪುರಸಭೆ ಅಧ್ಯಕ್ಷರಾದ ರೇಖಾ ಭಾಯಿ ಮಂಜುನಾಥ್ ಸಿಂಗ್, ಮುಖಂಡರಾದ ಭದ್ರಾಪುರ ಹಾಲಪ್ಪ, ಮೋಹನ್, ವಸಂತ್ ಗೌಡ, ಪುರಸಭೆಯ ಸದಸ್ಯರು, ಮುಖ್ಯಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

ಶಂಕುಸ್ಥಾಪನೆ ಮಾಡುತ್ತಿರುವ 07 ಕಾಮಗಾರಿಗಳ ಒಟ್ಟು ಮೊತ್ತ ರೂ. 453.93 ಲಕ್ಷಗಳು

ಕಾಮಗಾರಿ ವಿವರ :- ಅಂದಾಜು ಮೊತ್ತ 453.93 ಲಕ್ಷಗಳು

1 ಕಾನೂರು ಆಶ್ರಯ ಬಡಾವಣೆ ಮತ್ತು ಹಳೆಯೂರು ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ ರಸ್ತೆಗಳಿಗೆ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ.

2 ಹಳಿಯೂರು ಆಶ್ರಯ ಬಡಾವಣೆಯಲ್ಲಿನ ಉಳಿಕೆ ರಸ್ತೆಗಳಿಗೆ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ.

3 ಹೊಸಕೇರಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಚರಂಡಿ ನಿರ್ಮಾಣ ಮತ್ತು ಎಸ್.ಎಸ್ ರಸ್ತೆಯಿಂದ ಐ.ಟಿ.ಐ ಕಾಲೇಜ್ ಗೇಟ್ ವರೆಗೆ ಸಿ.ಸಿ ರಸ್ತೆ ನಿರ್ಮಾಣ.

4 ವಿನಾಯಕನಗರ ಮುಖ್ಯ ರಸ್ತೆ ಮತ್ತು ಅಡ್ಡ ರಸ್ತೆಗಳ ಅಭಿವೃದ್ಧಿ.

5 ಖಾಸಗಿ ಬಸ್‌ ನಿಲ್ದಾಣದಿಂದ ಮಾಸೂರು ವೃತ್ತದವರೆಗೆ ಎರಡೂ ಬದಿ ಚರಂಡಿ ನಿರ್ಮಾಣ ಮತ್ತು ಇಂಟರ್ ಲಾಕ್ ವ್ಯವಸ್ಥೆ.

6 ಶಾಂತಿನಗರ ಛಾನಲ್ ಕೆಳಭಾಗದ ರಸ್ತೆಗಳ ಅಭಿವೃದ್ಧಿ ಮತ್ತು ಪುರಸಭಾ ಕಛೇರಿ ಆವರಣದಲ್ಲಿ ರಸ್ತೆ ಡಾಂಬರೀಕರಣ.

7 ಪೌರವಿಹಾರ ಲೇಔಟ್ ನಿಂದ ಡಿಗ್ರಿ ಕಾಲೇಜ್ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ವಾರ್ಡ ನಂ: 16 ರಲ್ಲಿನ ತಾಲ್ಲೂಕು ಆಫೀಸ್ ಹಿಂಭಾಗ ಮುಖ್ಯ ರಸ್ತೆ ಮತ್ತು ಅಡ್ಡ ರಸ್ತೆಗಳಿಗೆ ಸಿಸಿ ರಸ್ತೆ ನಿರ್ಮಾಣ.

ವರದಿ ಪ್ರಜಾಶಕ್ತಿ…