ಶಿವಮೊಗ್ಗ ನಗರದ ಡಿ.ಎ.ಆರ್ ಮೈಧಾನದಲ್ಲಿ ವಲಯ ಮಟ್ಟದ ಗೃಹರಕ್ಷಕ ದಳದ ಎರಡನೇ ದಿನದ ಕ್ರೀಡಾಕೂಟ ನಡೆಯುತ್ತಿದ್ದು,ಭದ್ರಾವತಿಯ ಹೊನ್ನಟ್ಟಿ ಹೊಸೂರಿನ ಪೈರಿಂಗ್ ರೈಂಜ್ ನಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ನಾಲ್ಕು ಜಿಲ್ಲೆಗಳಿಂದ ನಡೆದ ರೈಪಲ್ ಶೂಟಿಂಗ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಪ್ಲಟೋನ್ ಸಾರ್ಜೆಂಟ್ ಚನ್ನವೀರಪ್ಪ ಗಾಮನಗಟ್ಟಿ ರವರು, ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನ ನಾದರು.

ಎರಡನೇ ಸ್ಥಾನ ಬೆಳ್ಳಿಯ ಪದಕ ಶಿವಮೊಗ್ಗ ಜಿಲ್ಲೆಯ ಜೈ ಶಂಕರ ರವರಿಗೆ ಚಿತ್ರದುರ್ಗದ ಸೇಕ್ಷನ್ ಲೀಡರ್ ಮಹೇಶ ರವರು, ಮೂರನೇ ಸ್ಥಾನ ಲಭಿಸಿದೆ, ಪ್ರಥಮ ಸ್ಥಾನ ಪಡೆದ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ, ಜಿಲ್ಲಾ ಗೃಹರಕ್ಷಕ ದಳದ, ಸಮಾದೇಷ್ಟರು, ಚಂದನ್ ಪಟೇಲ್ ಎಂ.ಪಿ, ಉಪ ಸಮಾದೇಷ್ಟರು, ಹಾಲಪ್ಪ ಎಸ್. ದಾವಣಗೆರೆ, ಮಾಜಿ ಉಪ ಸಮಾದೇಷ್ಟರು, ಬಿ.ಎನ್.ಪಾಟೀಲ್,
ಜಿಲ್ಲಾ ಸ್ಟಾಫ್ ತರಬೇತಿ ಆಫೀಸರ್, ಹರೀಶ್ ಪಾಟೀಲ್, ಹಾಗೂ ವಲಯದ ಗೃಹರಕ್ಷಕ ದಳದ, ಅಧಿಕಾರಿಗಳು, ಘಟಕದ ಶಿವಾನಂದಪ್ಪ, ಮಾಲತೇಶಪ್ಪ, ಮತ್ತು ಎಲ್ಲಾ ಅಧಿಕಾರಿಗಳು, ಹಾಗೂ ಎನ್.ಸಿ.ಓ ಅಧಿಕಾರಿಗಳು ಮತ್ತು ಗೃಹರಕ್ಷಕರು ಆಭಿನಂದನೆ ತಿಳಿಸಿದರು.

ಶಿವಮೊಗ್ಗ ಜಿಲ್ಲೆ ಶೂಟಿಂಗ್ ನಲ್ಲಿ, ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಷಯ ಕಿವಿಗೆ ಬೀಳುತ್ತಲೇ ಎನ್.ಸಿ.ಓ ಅಧಿಕಾರಿಗಳಾದ ಶ್ರೀಧರ್ ಮೂರ್ತಿ, ಎನ್.ಬಿ.ಸಿಂಗ್, ಡಿಜಿ. ಚಂದ್ರಶೇಖರ್, ಶ್ರೀದೇವಿ, ಮೀನಾಕ್ಷಿ, ಪಾರ್ವತಿ ದೇವಿ, ಪಲ್ಲವಿ, ಅರಳು ಮೇರಿ ಹಾಗೂ ಗೃಹರಕ್ಷಕರು ಸೇರಿ ಸಂಭ್ರಮಿಸಿದರು.

ವರದಿ ಪ್ರಜಾಶಕ್ತಿ…