ಶಿವಮೊಗ್ಗ; ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಾಂತಾ ಎಸ್.ಶೆಟ್ಟಿ ಅವರನ್ನು ರಾಜ್ಯ ಘಟಕ ನೇಮಕಗೊಳಿಸಿದೆ. ನೂತನ ಅಧ್ಯಕ್ಷೆ ಶಾಂತಾ ಶೆಟ್ಟಿ ಅವರು ಶಿವಮೊಗ್ಗ ನಗರದ ಮಥುರಾ ಪಾರಾಡೈಸ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಸೂಚಿಸಿದರು.

ನಿಕಟಪೂರ್ವ ಅಧ್ಯಕ್ಷ ಎನ್.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಘೋಷಣೆ ನಡೆಯಿತು. ಇದೇ ಸಂದರ್ಭದಲ್ಲಿ ಗೋಪಿನಾಥ್ ಮಾತನಾಡಿ, ಎಲ್ಲ ಕಲಾವಿದರು, ಕಲಾಪೋಷಕರು ಸಂಘಟಿತರಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಘಟಕದ ಬಲವರ್ಧನೆಗೆ ಸಂಪೂರ್ಣ ಶ್ರಮಿಸಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ರಾಜ್ಯ ಘಟಕ ನೀಡಿರುವ ಜವಾಬ್ದಾರಿಯನ್ನು ಸರ್ವ ಸದಸ್ಯರ ಸಹಕಾರ ಹಾಗೂ ಕಲಾವಿದರ ಬೆಂಬಲದಿಂದ ಸಮರ್ಥವಾಗಿ ನಿಭಾಯಿಸುತ್ತೇನೆ. ಶಾಲೆಗಳಲ್ಲಿ ಸುಗಮಸಂಗೀತ ಶಿಬಿರ, ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸುವುದು, ಎಲೆಮರೆಯ ಕಾಯಿಗಳಂತಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಹೀಗೆ ಅನೇಕ ಕಲೆಗಳಿಗೆ ಸಂಬಂಧಿಸಿದ ಸಮಾರಂಭ ನಡೆಸುತ್ತೇನೆ ಎಂದರು.

ಪದಾಧಿಕಾರಿಗಳ ಪಟ್ಟಿ…

ಘಟಕದ ಗೌರವಾಧ್ಯಕ್ಷ ಗೋಪಿನಾಥ್, ಅಧ್ಯಕ್ಷ ಶಾಂತಾ ಎಸ್ ಶೆಟ್ಟಿ, ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಖಜಾಂಚಿ ಜಿ.ವಿಜಯಕುಮಾರ್, ಪ್ರಧಾನ ಸಂಚಾಲಕರು ಭದ್ರಾವತಿ ವಾಸು, ಸಂಚಾಲಕರು ಶೋಭಾ ಸತೀಶ್, ಸದಸ್ಯರು ಉಷಾ ನಾಗರಾಜ್, ಸರೋಜಾ, ಉಪಾಧ್ಯಕ್ಷರು ಧನ್ಪಾಲ್ ಸಿಂಗ್ ರಜಪೂತ್, ಸದಸ್ಯರು ಜಯಶ್ರೀಶ್ರೀಧರ, ಮಥುರಾನಾಗರಾಜ್, ಜಿ.ಕೆ.ದಿನೇಶ್.
ತಾಲೂಕು ಘಟಕಕಗಳಿಗೆ ಶೀಘ್ರದಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಸೊರಬ ಹಾಗೂ ಹೊಸನಗರ ತಾಲೂಕು ಘಟಕ, ರಿಪ್ಪನ್‌ಪೇಟೆ ಹೋಬಳಿ ಘಟಕ ಅಸ್ತಿತ್ವದಲ್ಲಿವೆ. ಸಲಹಾ ಸಮಿತಿಯಲ್ಲಿ ಕೆ.ಯುವರಾಜ್, ಸುರೇಖಾಹೆಗಡೆ, ಸಿದ್ದಪ್ಪ, ಮೋಹನ್ ಶಾಸ್ತ್ರೀ, ರಾಜಾವಿಕ್ರಮ್, ಸಿ.ಮಾರಪ್ಪ ಇದ್ದಾರೆ ಎಂದರು.

ವರದಿ ಪ್ರಜಾಶಕ್ತಿ…