ಇಂದು ಶಿವಪ್ಪ ನಾಯಕ ಪ್ರತಿಮೆ ಎದುರು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಸುಮಲತಾ ಅಂಬರೀಷ್ರವರಿಗೆ ಮಾಜಿ ಮುಖ್ಯ ಮಂತ್ರಿಗಳು ಆದ ಕುಮಾರ ಸ್ವಾಮಿ ಅವರು ಸುಮಲತಾರವರಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯಲು ಹೋದರೆ ಕುಮಾರಸ್ವಾಮಿಯವರ ಕಾರ್ಯಕರ್ತರು ಅಲ್ಲಿ ಪ್ರವೇಶ ಮಾಡಲು ಬಿಡದೆ ರಸ್ತೆಗಳಿಗೆ ಅಡ್ಡಲಾಗಿ ಮಣ್ಣು ಸುರಿದು ಅಡ್ಡಿ ಪಡಿಸಿದ್ದಾರೆ ಒಬ್ಬ ಜಿಲ್ಲಾ ಸಂಸದರನ್ನೇ ಈ ರೀತಿ ತಡೆದು ಪ್ರವೇಶ ನೀಡದೆ ಗುಂಡಾಗಿರಿ ಮಾಡಿಸಿ ಸುಮಲತಾ ಅಂಬರೀಷ್ರವರಿಗೆ ಅಡ್ಡವಾಗಿ ಮಲಗಿಸಬೇಕು ಎಂದು ಒಬ್ಬ ಮಾಜಿ ಮುಖ್ಯ ಮಂತ್ರಿಗಳು ಒಬ್ಬ ಹೆಣ್ಣು ಮಗಳೆಂದು ನೋಡದೆ ಅವಮಾನಿಸಿರುವುದರಿಂದ , ಕಲಿಯುಗ ಕರ್ಣ ಅಂಬರೀಷ್ ಅಣ್ಣನವರ ಶವವನ್ನು ನಾನು ಮುಖ್ಯ ಮಂತ್ರಿ ಆಗಿದ್ದಕ್ಕೆ ಮಂಡ್ಯಕ್ಕೆ ತಂದೆ ಇಲ್ಲವಾಗಿದಲ್ಲಿ ಮಂಡ್ಯಕ್ಕೆ ತರಲು ಆಗುತಿರಲಿಲ್ಲ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ . ಆ ಸಂದರ್ಭದಲ್ಲಿ ಯಾರೇ ಮುಖ್ಯ ಮಂತ್ರಿಗಳೇ ಆಗಿದ್ದರೂ ಸಹ ಅದು ಅವರ ಕರ್ತವ್ಯ ಎಂದು ನೆನಪಿಸಲು ಬಯಸುತ್ತೇವೆ .
ಹಾಗೂ ಕುಮಾರಸ್ವಾಮಿಗಳು ಪದೇಪದೇ ಅಂಬರೀಶ್ರರವರ ಶವ ಮಂಡ್ಯಕ್ಕೆ ತಂದಿದ್ದು ನಾನು ನಾನು ಎಂದು ಹೇಳಿಕೊಳ್ಳುತ್ತಾ ಸುಮಲತಾ ಅಂಬರೀಶ್ರರ ವರಿಗೆ
ಅವಮಾನ ಮಾಡುತ್ತ ಕಣ್ಣೀರು ಹಾಕಿಸುತ್ತಿದ್ದಾರೆ . ಆದ್ದರಿಂದ ಈ ಸಂದರ್ಭದಲ್ಲಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಶ್ರೀ ವಾಟಾಳ್ ಮಂಜುನಾಥ್ರವರು ಕುಮಾರಸ್ವಾಮಿಯವರು ಸುಮಲತಾ ಅಂಬರೀಷ್ ಹತ್ತಿರ ಈ ಕೂಡಲೇ ಕ್ಷಮೆ ಕೊರಬೇಕೆಂದು ಸಂಘದ ಎಲ್ಲಾ ಪದಾಧಿಕಾರಿಗಳ ಪರವಾಗಿ ಆಗ್ರಹಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153