ಶನಿವಾರ ಸ.ಕಿ.ಪ್ರಾ.ಶಾಲೆ.ಬಸವನಗದ್ದ ತೀರ್ಥಹಳ್ಳಿ ಶಾಲೆಯಲ್ಲಿ ಸಿರಿಧಾನ್ಯ ಅಭಿಯಾನ ಹಾಗೂ ಮಕ್ಕಳ ಸಂತೆ ಯನ್ನು ನಡೆಸಲಾಯಿತು.
ಮುಖ್ಯ ಶಿಕ್ಷಕಿಯಾ ಅನಿತಾಕೃಷ್ಣ ರವರು ಮಕ್ಕಳಿಗೆ ಸಿರಿಧಾನ್ಯ ದ ಉಪಯೋಗ ದ ಬಗ್ಗೆ ಅರಿವು ಮೂಡಿಸಿದರು.

ಮಕ್ಕಳು ಸ್ಥಳೀಯವಾಗಿ‌ ಸಿಗುವ ತರಕಾರಿ ಹಣ್ಣು ಚುರುಮುರಿ ಮಸಾಲ ಮಂಡಕ್ಕಿ ಪುನರ್ ಪುಳಿ ಪಾನೀಯ ನಿಂಬೆಹಣ್ಣು ಪಾನೀಯ ಮಾರಿ ಹಣ ಎಣಿಸಿ ಸಂಭ್ರಮಿಸಿದರು.ಮಕ್ಕಳ ಸಂತೆ ಈ ಕಾರ್ಯಕ್ರಮ ದಿಂದ ಮಕ್ಕಳಲ್ಲಿ ವ್ಯಾಪಾರ ಮಾಡುವ ಲಾಭ ನಷ್ಟ ದ ಅರಿವು ಮೂಡುತ್ತದೆ.

ಈ ಸಂದರ್ಭದಲ್ಲಿ ಎಸ್ಡಿ ಎಮ್‌ಸಿ ಅಧ್ಯಕ್ಷರಾದ ಚಂದ್ರ ಕೆ.ಬಿ ಸದಸ್ಯರ ರಾದ ಕಾವ್ಯ ಮಾಲಾ ಶಾರದ ಗ್ರಾಮಸ್ಥರಾದ ಶಾಂತಮ್ ಕೃಷ್ಣಮೂರ್ತಿ ರವರು ಸಂತೆಯಲ್ಲಿ ಪಾಲ್ಗೊಂಡರು.ಶಿಕ್ಷಣ ಇಲಾಖೆಯ ಶನಿವಾರ ಸಂಭ್ರಮಕ್ಕೆ ಪೂರಕವಾದ ಕಾರ್ಯಕ್ರಮ ಇದಾಗಿದ್ದು ಮಕ್ಕಳಲ್ಲಿ ಸಿರಿಧಾನ್ಯ ಸೇವನೆ ಸ್ವಾಸ್ಥ್ಯ ಆರೋಗ್ಯದ ಅರಿವು ವ್ಯವಹಾರ ಮಾಡುವ ಅರಿವು ಮೂಡಿಸಲಾಯಿತು.ಪ್ರಭಾರ ಮುಖ್ಯಶಿಕ್ಷಕಿ ಎಲ್ಲರನ್ನು ವಂದಿಸಿದರು.

ವರದಿ ಪ್ರಜಾಶಕ್ತಿ…