ಮುಂಬೈ ನ್ಯೂಸ್…

ಮುಂಬಯಿ ಡಿ. 12: ಗೌರವ್ ಜಗನ್ನಾಥ ಶೆಟ್ಟಿ ಮುಂಬಯಿಯಲ್ಲಿ ನಡೆದ ಐ.ಪಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್.ಎಮ್. ಶೆಟ್ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಈತ ಉನ್ನತ ವಿದ್ಯಾಭ್ಯಾಸವನ್ನು ನೆರೂಲ್ ನ ಡಿ.ವೈ.ಪಾಟೀಲ್ ವಿದ್ಯಾ ಸಂಕುಲದಲ್ಲಿ ಪೂರೈಸಿದ್ದಾರೆ.

ಈತ ಮೂಲತ ಸಿದ್ಧಕಟ್ಟೆ ಕೊನರೆ ಗುತ್ತು ಜಗನ್ನಾಥ ಸೀತಾರಾಮ ಶೆಟ್ಟಿ ಹಾಗೂ ಎರ್ಮಾಳು ಲೋಕನಾಡು ಮನೆ ಆಶಾ ಜಗನ್ನಾಥ ಶೆಟ್ಟಿ ದಂಪತಿಯ ಪುತ್ರ, ಸ್ವಾತಿ ಜೆ. ಶೆಟ್ಟಿಯ ಸಹೋದರ ಪೆರ್ನ ದೊಡ್ಡ ಮನೆ ಸುಬ್ಬಯ್ಯ ಚೌಟರ ಮೊಮ್ಮಗ, ಎರ್ಮಾಳು ಲೋಕನಾಡು ಮನೆ ಸುರೇಶ ಚೌಟರವರ ಅಳಿಯ ರಾಗಿದ್ದಾರೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಸಮಸ್ತ ಬಂಟರ ಸಮಾಜ ಹಾರೈಸುತ್ತದೆ.