ಶಿವಮೊಗ್ಗ ನಗರದ ಎನ್.ಇಎಸ್ ಮೈದಾನದಲ್ಲಿ ದಿ 25ರಂದು ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ 3 ನೇ ತ್ರೈಮಾಸಿಕ ಪ್ರಾಂತ ಸಮ್ಮೇಳನ , ಪ್ರಾಂತೀಯ ಕಾರ್ಯಕರ್ತರ ಸಮಾಗಮ , ಬೃಹತ್ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದ್ದು ಸಾರ್ವಜನಿಕರ ಹಿತ ದೃಷ್ಟಿಯಿಂದ ನಗರದಲ್ಲಿ ಎರಡು ದಿನ ಮಧ್ಯ ಮಾರಾಟ ನಿಷೇಧಿಸಲಾಗಿದೆ.

ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಶಿವಮೊಗ್ಗ ನಗರದಲ್ಲಿರುವ ಎಲ್ಲಾ ರೀತಿಯ ಸನ್ನದು ಮದ್ಯ ಮಾರಾಟಗಳನ್ನು ದಿನಾಂಕ 24 ರಂದು ಸಂಜೆ 6-00 ಗಂಟೆಯಿಂದ 25ರ ರಾತ್ರಿ 11-30ಗಂಟೆಯವರೆಗೆ ನಿಷೇಧಿಸಿ , ಪಾನ ನಿರೋಧ ಶುಷ್ಕ ದಿನ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರ ಆದೇಶ ಹೊರಡಿಸಿದ್ದಾರೆ.

ವರದಿ ಪ್ರಜಾಶಕ್ತಿ…