ಶಿವಮೊಗ್ಗ : ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮೇಯರ್ ಸ್ಥಾನದಲ್ಲಿ ಇರುವವರು ತಮ್ಮ ಅವಧಿಯ ನಂತರ ಸ್ಥಾನವನ್ನು ಬಿಡಲು ಒಪ್ಪುವುದಿಲ್ಲ, ಆದರೆ ಪ್ರಧಾನಿ ಸ್ಥಾನದಲ್ಲಿದ್ದ ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇವಲ ಒಂದು ಸಂಸದರಾದ ಹಿನ್ನಡೆ ಆದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ, ನನಗೆ ಅಧಿಕಾರಕಿಂತ ಬಿಜೆಪಿಯ ಕಾಯಕರ್ತ ಶಾಶ್ವತ ಸ್ಥಾನ ಇದೆ ಎಂದು ತಿಳಿಸಿ ಉತ್ತಮ ಜನಪರ ಕಾರ್ಯವನ್ನು ಮಾಡಿದ್ದಾರೆ ಈಗಿನ ಚುನಾಯಿತ ಪ್ರತಿನಿಧಿಗಳಿಗೆ ಅಟಲ್ ಜಿ ಅವರ ಆಡಳಿತ ಕಾರ್ಯ ಮಾದರಿಯಾಗಬೇಕು ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗ ನಗರದ ವಿನಾಯಕ ನಗರ / ಹನುಮಂತ ನಗರ ವಾರ್ಡ್ 10ರಲ್ಲಿ ಭಾರತಮಾತೆಯ ಸುಪುತ್ರರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನೆಲೆ ನಿಂತಿರುವ ಮಹಾನ್ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮದಿನ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿ ಬ್ಲಾಂಕೆಟ್ ವಿತರಿಸಿದರು.

ಶಾಸಕರಾದ ಕೆ. ಎಸ್ ಈಶ್ವರಪ್ಪನವರು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹರಾದ ಗಿರೀಶ್ ಕಾರಂತ್ ಅವರು, ಮಹಾಪೌರರಾದ ಶಿವಕುಮಾರ್, .ನಗರ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಸುಡಾ ಅಧ್ಯಕ್ಷರಾದ ನಾಗರಾಜ್, ಜ್ಯೋತಿ ಪ್ರಕಾಶ್,
ಪಾಲಿಕೆಯ ಸದಸ್ಯರಾದ ವಿಶ್ವಾಸ್, ರಾಹುಲ್ ಬಿದರೆ, ಆರತಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…