ಭದ್ರಾವತಿ ತಾಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ರುದ್ರೇಶ ಆರ್ ಎನ್ ಕೂಡ್ಲಿಗೆರೆ ರವರು ಸಾರ್ವನುಮತದಿಂದ ಅವಿರೋಧ ಆಯ್ಕೆಯಾಗಿದ್ದಾರೆ.

ಹಿಂದಿನ ಉಪಾಧ್ಯಕ್ಷರಾದ ನಗರಾಜ ಗೌಡ್ರು ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ರವರು ಚುನಾವಣೆ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಾರ್ವತಿ ಬಾಯಿ, ಮಾಜಿ ಅಧ್ಯಕ್ಷರಾದ ಜಯಣ್ಣ, ಮಲ್ಲಕ್ ಬಿ ವೀರಪ್ಪನ್, ಉಮಾದೇವಿ ತಿಪ್ಪೇಶ್, ಮಾಜಿ ಉಪಾಧ್ಯಕ್ಷರಾದ ಕುಬೇರ್ ನಾಯ್ಕ, ನಾಗರಾಜ್ ಗೌಡ್ರು, ಸದಸ್ಯರಾದ ವಿಶ್ವನಾಥ, ಸ್ವಾಮೀನಾಥನ್, ಸಿದ್ದಮ್ಮ ನಾಗೇಶ್ ,ಗೌರಮ್ಮ ಮಹಾದೇವ , ನೀಲಬಾಯಿ ಚಂದ್ರನಾಯಕ್ , ಭಾಗ್ಯಮ್ಮ ರಾಮಚಂದ್ರ, ಅರಕೆರೆ ಲಕ್ಷ್ಮೀಪತಿ, ವೀ ಎಸ್ ಎಸ್ ಎನ್ ಅಧ್ಯಕ್ಷರಾದ ಎನ್ ಎಚ್ ಮಹೇಶ್ವರಪ್ಪ, ಪರಮೇಶ್ವರಪ್ಪ, ಕೂಡ್ಲಿಗೆರೆ ಕಲ್ಪನಹಳ್ಳಿ ಕೋಡಿಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…