ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ (ರಿ) .
ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ .ಚಂದ್ರಗಿರಿ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಿವಮೊಗ್ಗ ಒಕ್ಕಲಿಗರ ಮಹಿಳಾ ಸಂಘದ ಸದಸ್ಯರುಗಳಿಗೆ ಸದಸ್ಯತ್ವದ ಗುರುತಿನ ಚೀಟಿ ವಿತರಿಸಲಾಯಿತು.

ಅದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ರೆಡ್ ಕ್ರಾಸ್ ವತಿಯಿಂದ ಉಚಿತ ಕ್ಯಾನ್ಸರ್ ಅರಿವು ಮುಡಿಸುವ ಮತ್ತು ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಹಾಗು ಸೌಂದರ್ಯ ಮತ್ತು ಚರ್ಮರೋಗ ತಜ್ಘರಿಂದ ಉಚಿತ ತಪಾಸಣೆಯನ್ನು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ರಾಮಕೃಷ್ಣ ರವರು ವಹಿಸಿ ಮಹಿಳೆಯರು ಮನೆಯ ಜವಬ್ದಾರಿಯಲ್ಲಿ ತೊಡಗಿಸಿಕೊಂಡು‌ ಅವರ ಆರೋಗ್ಯದ ಕಡೆ ಗಮನ ಹರಿಸದೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯನ್ನು ಗಮನಿಸದೆ ಬದುಕಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.ಹಾಗಾಗಿ ಸದಸ್ಯರ ಶ್ರೇಯೋಭಿವೃದ್ದಿಗಾಗಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದೆ ಮಹಿಳೆಯರು ಆರೋಗ್ಯವಾಗಿದ್ದಲ್ಲಿ ತಮ್ಮ ಮನೆಯ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸಬಹುದಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿಗಳಾದ ಡಾ. ದಿನೇಶ್ ರವರು ರೆಡ್ ಕ್ರಾಸ್ ವತಿಯಿಂದ ಸಿಗುವ ಸೌಲಬ್ಯಗಳ ಬಗ್ಗೆ ವಿವರಿಸಿ ಹಾಗು ಡಾ. ಜಯಚಂದ್ರ ಸರ್ ಚಂದ್ರಗಿರಿ ಆಸ್ಪತ್ರೆ ಮತ್ತು ಡಾ. ಮಾಧುರ್ಯಾ ಸ್ತ್ರೀ ರೋಗ ತಜ್ಘರು ಮಹಿಳೆಯರು ಕ್ಯಾನ್ಸರ್ ಬರದಂತೆ ತಡಗಟ್ಟಲು ಮುನ್ನೆಚರಿಗೆ ಹೇಗೆ ಮಾಡಬೇಕೆನ್ನುವುದರ ಬಗ್ಗೆ ವಿವರವಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ನಿರ್ಧೇಶಕರುಗಳು ಹಾಗು ಸದಸ್ಯರುಗಳು ಹಾಗು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು .

ವರದಿ ಪ್ರಜಾಶಕ್ತಿ…