ತಾವರೆಕೆರೆ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆಯ ವಾಸಿಯಾದ ಶ್ರೀಮತಿ ಮೋಸಿನ್ ಅಹಮ್ಮದ್ ರವರು ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಆಟೋದಲ್ಲಿ ಹೋಗಿದ್ದು, ಆಟೋ ಇಳಿಯುವ ಸಮಯದಲ್ಲಿ ತಾವು ತಂದಿದ್ದ ಬಟ್ಟೆಯ ಬ್ಯಾಗ್ ಮತ್ತು ನಗದು ಹಣವಿದ್ದ ಪರ್ಸ್ ಅನ್ನು ಮರೆತು ಆಟೋದಲ್ಲಿಯೇ ಬಿಟ್ಟು ಇಳಿದು ಹೋಗಿದ್ದಾರೆ.

ಸದರಿ ಆಟೋದ ಚಾಲಕರಾದ ಶ್ರೀ ನಾಗರಾಜ್, ಶಿವಮೊಗ್ಗ ಟೌನ್ ರವರು ತಮ್ಮ ಆಟೋದಲ್ಲಿದ್ದ ಬ್ಯಾಗ್ ಹಾಗೂ ನಗದು ಹಣವಿದ್ದ ಪರ್ಸ್ ಅನ್ನು ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ತಂದು ನೀಡಿ ಪ್ರಾಮಾಣಿಕತೆಯನ್ನು ತೋರಿರುತ್ತಾರೆ. ನಂತರ ಬ್ಯಾಗ್, ಪರ್ಸ್ ಮತ್ತು ಅದರಲ್ಲಿದ್ದ 8,500/- ರೂ ನಗದನ್ನು ಶ್ರೀ ಸಂತೋಷ್ ಕುಮಾರ್, ಪೊಲೀಸ್ ನಿರೀಕ್ಷಕರವರು, ಸಂಚಾರ ವೃತ್ತ ಶಿವಮೊಗ್ಗರವರ ಸಮ್ಮುಖದಲ್ಲಿ ಶ್ರೀ ನಾಗರಾಜ್ ರವರಿಂದ ಶ್ರೀಮತಿ ಮೋಸಿನ್ ಅಹಮ್ಮದ್ ರವರಿಗೆ ಹಿಂದಿರುಗಿಸಲಾಗಿರುತ್ತದೆ. ಬ್ಯಾಗ್ ಮತ್ತು ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ತೋರಿದ ಆಟೋ ಚಾಲಕರಾದ ಶ್ರೀ ನಾಗರಾಜ್ ರವರ ಉತ್ತಮ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ…