ಶಿಕಾರಿಪುರ ನ್ಯೂಸ್…

ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕರಾದ ಶ್ರೀ ಗುಣ ರಂಜನ್ ಶೆಟ್ಟಿ ಸಾರಥ್ಯದಲ್ಲಿ ಶಿಕಾರಿಪುರ ಅಧ್ಯಕ್ಷರಾದ ಹುಲಿಗಿ ಕೃಷ್ಣಾರವರು ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರಕಾರ್ಮಿಕರ ನೇಮಖಾತಿ ಯಲ್ಲಿ ಸರ್ಕಾರ ರೋಸ್ಟರ್ ಪದ್ಧತಿ ಜಾರಿ ಮಾಡದೇ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು ಹಾಗೂ ಸ್ವಚ್ಛತೆ ಮಾಡುವ ಕೆಲಸವನ್ನು ಆದಿ ಕಾಲದಿಂದ ಎಸ್ ಸಿ ಜನಾಂಗದ ಕಾರ್ಮಿಕರು ಮಾಡುತ್ತಿದ್ದು ಈಗ ರೋಸ್ಟರ್ ಪದ್ಧತಿಯಲ್ಲಿ ಎಲ್ಲಾ ಜಾತಿಯವರಿಗೆ ಅವಕಾಶ ಕೊಟ್ಟರೆ ಎಸ್ ಸಿ ಯವರ ಹಕ್ಕು ಕಸಿದಂತಾಗುತ್ತದೆ ಎಂದರು.

ಇನ್ನುಳಿದ ಕಾರ್ಮಿಕರಾದ ನೀರು ಘಂಟಿ ವಾಟರ್ ಮೆನ್ ಗಳಿಗೆ ಗುತ್ತಿಗೆ ಕಾರ್ಮಿಕರ ನೇಮಕಾತಿಯಲ್ಲಿ ರೋಸ್ಟರ್ ಪದ್ಧತಿ ಅಳವಡಿಸಿ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಿ
ಕೂಡಲೇ ಚುನಾವಣೆ ದಿನಾಂಕ ಘೋಷಣೆ ಮುನ್ನ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಳಿಸಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಘುವೀರ್ ಸಿಂಗ್ ಮತ್ತು ಸಂಘಟನೆ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…