ಮುಂಬರುವ ವಿಧಾನಸಭೆ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಲು ನಾಗರಿಕರಿಂದಲೇ ಸಹಿ ಸಂಗ್ರಹಣೆ ಮಾಡುವುದರ ಮೂಲಕ ನಗರದ ಮಂಡ್ಲಿಯ ಸ್ಮಶಾನದಿಂದ ಚುನಾವಣಾ ಅಭಿಯಾನವನ್ನು ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್.ವೆಂಕಟೇಶ್ ಪ್ರಜಾಕೀಯ ವಿಭಿನ್ನ ರೀತಿಯಲ್ಲಿ ಪ್ರಾರಂಭಿಸಿದರು.

ಸ್ಮಶಾನದಲ್ಲೆ ಸುದ್ದಿಗೋಷ್ಟಿ ಮಾಡಿದ ಅವರು, ಪಕ್ಷದ ತೀರ್ಮಾನದಂತೆ ಮತದಾರರ ಬೇಡಿಕೆಗಳನ್ನು ಈಡೇರಿಸಲು ನಾನು ಸಿದ್ಧ ಎಂದು ಧೃಡೀಕರಿಸಿ ನಂತರ ಅವರು ಈತ ಅಭ್ಯರ್ಥಿಯಾಗಲು ಸಮ್ಮತಿಯಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷಕ್ಕೆ ತಿಳಿಸಬೇಕು. ಯಾರಿಗೆ ಹೆಚ್ಚಿನ ಬೆಂಬಲ ನಾಗರೀಕರು ನೀಡುತ್ತಾರೆ ಪಕ್ಷ ಅವರಿಗೆ ಈ ಬಾರಿಯ ಟಿಕೇಟ್ ನೀಡುತ್ತದೆ. ಆದ್ದರಿಂದ ಸತ್ಯಹರಿಶ್ಚಂದ್ರನ ಪವಿತ್ರ ಕ್ಷೇತ್ರವಾದ ಸ್ಮಶಾನದಿಂದಲೇ ನಾನು ವಿಭಿನ್ನ ರೀತಿಯ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…