ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮನೆಗಳ್ಳತನ ಪ್ರಕರಣವನ್ನು ಶ್ರೀ ರವಿ ಎನ್,ಎಸ್, ಪಿಐ, ವಿನೋಬಗರ ಪೊಲೀಸ್ ಠಾಣೆ ರವರ ನೇತೃತ್ವದ ಶ್ರೀ ರಮೇಶ್ ಎ, ಎಎಸ್ಐ, ಶ್ರೀ ರಾಜು ಕೆ ಆರ್, ಸಿಪಿಸಿ ಮತ್ತು ಶ್ರೀ ಚಂದ್ರಾನಾಯ್ಕ ಬಿ, ಸಿಪಿಸಿ ರವರುಗಳನ್ನೊಳಗೊಂಡ ತಂಡ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮನೆಗಳ್ಳತನ ಪ್ರಕರಣವನ್ನು ಶ್ರೀ ರಮೇಶ್ ಟಿ, ಪಿ ಎಸ್ ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಶ್ರೀಮತಿ ಗೀತಾ, ಮಹೆಚ್.ಸಿ, ಶ್ರೀ ಚಿನ್ನ ನಾಯ್ಕ, ಸಿಪಿಸಿ, ಶ್ರೀ ಶಿವರಾಜ್ ನಾಯಕ್, ಸಿಪಿಸಿ ಮತ್ತು ಶ್ರೀ ಆಂಜನೇಯ ಎಂ, ಸಿಪಿಸಿ, ರವರುಗಳನ್ನೊಳಗೊಂಡ ತಂಡವು ಅಪರಾಧ ವರದಿಯಾದ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಪತ್ತೆ ಮಾಡಿ ಕಳುವಾದ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು, ಉತ್ತಮ ಕಾರ್ಯವನ್ನು ನಿರ್ವಹಿಸಿರುತ್ತಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸದರಿ ತನಿಖಾ ತಂಡಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಉತ್ತಮ ಕಾರ್ಯವನ್ನು ಪ್ರಶಂಸಿಸಿ, ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಪ್ರಭು ಡಿ.ಟಿ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್,ಬಿ ಶಿವಮೊಗ್ಗ, ಶ್ರೀ ಸತೀಶ್ ಕುಮಾರ್, ಪೊಲೀಸ್ ನಿರೀಕ್ಷಕರು, ನಿಸ್ತಂತು, ಶಿವಮೊಗ್ಗ ಮತ್ತು ಶ್ರೀಮತಿ ಜಯಶ್ರೀ ಎಸ್ ಮಾನೆ, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ರವರು ಉಪ ಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…