ಇಂದು (13-07-2021) ಶಾಸಕರು ಹಾಗೂ MSIL ಅಧ್ಯಕ್ಷರಾದ ಹೆಚ್.ಹಾಲಪ್ಪ ನವರು ಹುಬ್ಬಳ್ಳಿ ಯಲ್ಲಿ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ರವರೊಂದಿಗೆ, MSIL ನಿಗಮದ ಸಭೆ ನೆಡೆಸಿ, ಸ್ಥಳ ಪರಿಶೀಲನೆ ನೆಡೆಸಿದರು.

MSIL ನಿಗಮವು ಹುಬ್ಬಳ್ಳಿಯಲ್ಲಿ 2 ಎಕರೆ ಜಾಗ ಹೊಂದಿದೆ, ಈ ಪ್ರದೇಶದಲ್ಲಿ ಅಂದಾಜು 30 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ, ಗೋದಾಮು ಹಾಗೂ ವಸತಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಖಾಸಗಿಯವರಿಗೆ ವಾರ್ಷಿಕ 40 ಲಕ್ಷ ರೂ ಬಾಡಿಗೆ ಕಟ್ಟುವುದು ಉಳಿತಾಯವಾಗುವುದರೊಂದಿಗೆ, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಲಾಭದಾಯಕ ವಾಗಲಿದೆ ಎಂದರು. ಈ ಸಂಧರ್ಭದಲ್ಲಿ MSIL ಎಂ.ಡಿ ವಿಕಾಸ್ ಕುಮಾರ್, CGM ರಮಾಕಾಂತ್ ಹೆಬ್ಬಳ್ಳಿ, ನಿರ್ದೇಶಕರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153