ಶಿವಮೊಗ್ಗ ನಗರದಲ್ಲಿ ಶ್ರೀಮತಿ ಜಯಶ್ರೀ ಎಸ್ ಮಾನೆ, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ರವರು ಕರ್ನಾಟಕ ಸಂಘ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಬಾಕಿ ಇರುವ ಇ-ಚಲನ್ ದಂಡವನ್ನು 11ರ ಒಳಗಾಗಿ ಪಾವತಿ ಮಾಡಿ ಎಂದು ತಿಳಿಸಿದರು.

ಸದರಿ ವಾಹನಗಳಿಗೆ ವಿಧಿಸಿದ ದಂಡದ ಮೊತ್ತದಲ್ಲಿ ಶೇಕಡಾ 50% ರಿಯಾಯಿತಿ ಇರುವ ಬಗ್ಗೆ ಮತ್ತು ಕೂಡಲೇ ಬಾಕಿ ಇರುವ ದಂಡವನ್ನು ಪಾವತಿಸುವ ಕುರಿತು ಅರಿವು ಮೂಡಿಸಿದರು. ಜೊತೆಯಲ್ಲಿ ಸಾರ್ವಜನಿಕರು ಸರ್ಕಾರದ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ತಿಳಿ ಹೇಳಿದರು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…