SANDALWOOD NEWS…

ಸ್ಯಾಂಡಲ್ ವುಡ್ ನ ವಿಶ್ವ ಜನಮನ ಗೆದ್ದ ಕಾಂತರಾ ಚಿತ್ರ ನಟ ನಿರ್ದೇಶಕ ಡಿವೈನ್ ಸ್ಟಾರ್ ರೀಶಬ್ ಶೆಟ್ಟಿ ರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.

ಮುಂಬೈ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಿನಿಸ್ಟ್ರಿ ಆಫ್ ಇನ್ಫಾರ್ಮಶನ್ ಅಂಡ್ ಬ್ರಾಡ್ ಕ್ಯಾಸ್ಟಿಂಗ್ ನೇಮಿಸಿರುವ ಡೈರೆಕ್ಟರೇಟ್ ಆಫ್ ಫಿಲಂ ಫೆಸ್ಟಿವಲ್ ವತಿಯಿಂದ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ನಲ್ಲಿ ರಿಷಬ್ ಶೆಟ್ಟಿಯವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ರಿಷಬ್ ಶೆಟ್ಟಿ ಮಾತನಾಡಿ ಈ ಪ್ರಶಸ್ತಿ ಸಿಕ್ಕಿರುವುದು ಜೀವಮಾನದ ಅತ್ಯಂತ ಅವಿಸ್ಮರಣೀಯ ಕ್ಷಣ. ಈ ಪ್ರಶಸ್ತಿಯನ್ನು ಕಾಂತದ ಚಿತ್ರದ ಸಮಸ್ತ ತಂಡಕ್ಕೆ ಅರ್ಪಿಸುತ್ತೇನೆ ಎಂದರು. ವಿಶೇಷವಾಗಿ ಹೊಂಬಾಳೆ ತಂಡ ಮತ್ತು ಧರ್ಮಸ್ಥಳದ ಧರ್ಮಧಿಕಾರಿ ಡಾ. ವೀರೇಂದ್ರ ಹೆಗಡೆ ರವರಿಗೆ ವಿಶೇಷ ಕೃತಜ್ಞತೆ ಎಂದರು. ನಾಡಿನ ಸಮಸ್ತ ಎಲ್ಲ ಅಭಿಮಾನಿಗಳಿಗೂ ನಾನು ಯಾವತ್ತೂ ಚಿರಋಣಿ ಎಂದರು.

ಕಾಂತಾರ ಚಿತ್ರದ ಮೂಲಕ ವಿಶ್ವದೆಲ್ಲೆಡೆ ಮನೆ ಮಾತಾಗಿರುವ ಸಂದಿರುವ ಈ ಪ್ರಶಸ್ತಿ ತುಳುನಾಡಿನ ಆಚರಣೆಗಳಿಗೆ ಸಂದ ಗೌರವವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ವರದಿ ಪ್ರಜಾ ಶಕ್ತಿ…