ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಹೊಸನಗರ ತಾಲೂಕು ಸಮಿತಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ನಾಲ್ಕನೆಯ ಜಾನಪದ ಸಮ್ಮೇಳನ ನೆಡೆಸಲು ತೀರ್ಮಾನ ಮಾಡಲಾಯಿತು.

ಮಾರ್ಚ್ ೨ ರಂದು ಸಂಜೆ ರಿಪ್ಪನ್ ಪೇಟೆಯ ಜಿ.ಎಸ್.ಬಿ. ಕಲ್ಯಾಣ ಮಂದಿರದಲ್ಲಿ ಸೇರಿದ ಸಭೆ ಯಲ್ಲಿ ತೀರ್ಮಾನ ಮಾಡಲಾಯಿತು. ಕಜಾಪ ತಾಲ್ಲೂಕು ಅಧ್ಯಕ್ಷರಾದ ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಕಸಾಪ ತಾಲ್ಲೂಕು ಅಧ್ಯಕ್ಷರಾದ ತ. ಮ. ನರಸಿಂಹ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮತ್, ಕಜಾಪ ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಶೇಟ್, ವ್ಯವಸಾಯ ಉತ್ಪನ್ನಗಳ ಸಹಾಕಾರ ಸಂಘದ ನಿರ್ದೇಶಕ ಮಂಡಳಿಯ ಪದಾಧಿಕಾರಿಗಳು, ಕಸಾಪ, ಕಜಾಪ, ಕಸಾಸಾಂ ವೇದಿಕೆ ಯ ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಾರ್ಚ್ ೧೯ ರಂದು ಭಾನುವಾರ ಸಮ್ಮೇಳನ ಮತ್ತು ವ್ಯವಸಾಯೋತ್ಪನ್ನ ಸಹಕಾರ ಸಂಘದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನೆಡೆಯಲಿದೆ.

ವರದಿ: ಸುರೇಶ್ ಬಿ ಎಸ್…