ಮೈಸೂರು: ಶಿವಮೊಗ್ಗದ ಪತ್ರಕರ್ತ ಹಾಗೂ ಛಾಯಾಗ್ರಾಹಕ ಬಿ. ನಾಗರಾಜ್ ಶೆಣೈ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವಾರ್ಷಿಕ ದತ್ತಿ ಪ್ರಶಸ್ತಿಯಾದ `ಮಿಂಚು ಶ್ರೀನಿವಾಸ’ ಪ್ರಶಸ್ತಿಯನ್ನು ಇಂದು ಮೈಸೂರಿ ರಾಜೇಂದ್ರ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯು ೫ ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಗೌರವಾದರಗಳನ್ನು ಒಳಗೊಂಡಿದೆ.
ಇದೇ ಸಂದರ್ಭದಲ್ಲಿ ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿಯನ್ನು ಚಾಮರಾಜನಗರ ಜಿಲ್ಲೆಯ ಹಿರಿಯ ಪತ್ರಕರ್ತ ಆರ್.ಎನ್.ಸಿದ್ಧಲಿಂಗ ಸ್ವಾಮಿ ಅವರಿಗೆ ಹಾಗೂ ಎಂ.ನಾಗೇAದ್ರರಾವ್ ಪ್ರಶಸ್ತಿಯನ್ನು ಮಡಿಕೇರಿಯ ಬ್ರಹ್ಮಗಿರಿ ಕೊಡವ ಪತ್ರಿಕೆ ಸಂಪಾದಕ ಡಾ.ಉಳ್ಳಿಯಡ ಎಂ. ಪೂವಯ್ಯ ಅವರಿಗೆ ನೀಡಲಾಯಿತು. ಉಳಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನದಾಸ್ ಹಿರಿಯರಿಗೆ ಗೌರವ, ಪ್ರತಿಭೆಗಳಿಗೆ ಪುರಸ್ಕಾರ ನೀಡುವುದೇ ಸಮಾಜದ ಒಳ್ಳೆಯ ಗುಣ. ಪ್ರಶಸ್ತಿ ಪಡೆದವರ ಜವಾಬ್ದಾರಿ ಹೆಚ್ಚಿದೆ. ಅವರು ಮಾರ್ಗದರ್ಶಕರಾಗಲಿ, ಮತ್ತಷ್ಟು ಸಮಾಜಮುಖಿಯಾಗಲಿ ಎಂದು ಹಾರೈಸಿದರು.
ಸಂವಿಧಾನದ ಓದು ಅವರ ಕಾರ್ಯಕ್ಷಮತೆಯನ್ನು ಹೆಚ್ವಿಸುತ್ತದೆ. ಸಂವಿಧಾನದ ಬಗ್ಗೆ ಅಪಸ್ವರ ಸಲ್ಲದು. ಅಪವಾಖ್ಯಾನ ಮಾಡಬಾರದು. ಸಂವಿಧಾನದ ಮೂಲತತ್ವಗಳನ್ನು ತಿದ್ದಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು ಎಂದ ಅವರು, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಆಡಳಿತ ಸರ್ಕಾರದ ಕೈಗೊಂಬೆಗಳಾಗಿರುವುದು ದುರಂತ ಎಂದರು.

ವೇದಿಕೆಯಲ್ಲಿ ಕೆಯೂಡಬ್ಲುö್ಯಜೆ ರಾಜ್ಯಾಧ್ಯಕ್ಷ ಶಿವನಾಂದ್ ತಗಡೂರು, ಮೇಯರ್ ಶಿವಕುಮಾರ್, ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ಎಸ್.ಟಿ. ರವಿಕುಮಾರ್, ಜಿ.ಎನ್. ಮೋಹನ್, ಉದ್ಯಮಿಗಳಾದ ಎಂ. ರಾಜೇಂದ್ರ, ಸಿ. ನಾರಾಯಣ ಗೌಡ, ಶಿವಮೊಗ್ಗದ ಪತ್ರಕರ್ತರಾದ ಎನ್. ರವಿಕುಮಾರ್, ವೈದ್ಯ, ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…