ಕರೋನಾ ಸಂಕಷ್ಟದಲ್ಲಿ ಜನಹಿತ ಮರೆತು ಅಧಿಕಾರದ ಗದ್ದುಗೆಗಾಗಿ ಆಂತರಿಕ ಕಿತ್ತಾಟದಲ್ಲಿ ತೊಡಗಿದ್ದು , ರಾಜ್ಯದಲ್ಲಿ ಅಧಿಕಾರದ ದೊಂಬರಾಟ ನಡೆಯುತ್ತಿದ್ದು ಕೂಡಲೇ ಸರ್ಕಾರವನ್ನು ವಿಸರ್ಜಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಪ್ರಜಾಶಕ್ತಿ ಕನ್ನಡಿಗರ ವೇದಿಕೆಯ ರಾಜ್ಯಾಧ್ಯಕ್ಷರಾದ ಎ ನಾಗರಾಜ್ ಅಂಬರ್ ಕರ್ ರಾಜ್ಯಪಾಲರನ್ನು ಒತ್ತಾಯಿಸಿದರು.
ಇದು ಜನಾದೇಶ ಪಡೆದು ಬಂದ ಸರ್ಕಾರಗಳೆಲ್ಲ ಆಪರೇಷನ್ ಕಮಲದಡಿ ಬಂದ ಸರ್ಕಾರ ಜನಹಿತ ಮರೆತು ಅಧಿಕಾರಕ್ಕಾಗಿ ಒಬ್ಬೊಬ್ಬ ನಾಯಕರು ದಿನಕ್ಕೊಂದು ರೀತಿಯ ಹೇಳಿಕೆಗಳನ್ನು ನೀಡಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಜನರ ಹಿತಕ್ಕಿಂತ ಇವರಿಗೆ ಅಧಿಕಾರದ ವ್ಯಾಮೋಹದ ಹೆಚ್ಚಾಗಿದ್ದು ,ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು ,ಜನಪರ ಸರ್ಕಾರ ಇದೆಯೇ ಎಂದು ಜನರಲ್ಲಿ ಪ್ರಶ್ನೆ ಉದ್ಭವವಾಗುತ್ತಿದ್ದು ಸರ್ಕಾರವನ್ನು ವಜಾಗೊಳಿಸಿ ಕೊಡದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ಎಂದು ರಾಜ್ಯಪಾಲರಿಗೆ ಒತ್ತಾಯ ಪಡಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153