ಶಿವಮೊಗ್ಗ ನಗರದ ತಿಲಕ ನಗರ ಹತ್ತಿರ ಮ್ಯಾಕ್ಸ್ ಆಸ್ಪತ್ರೆಯ ಪಕ್ಕದಲ್ಲಿರುವ ಕಂಜರ್ವನ್ಸಿ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾದ ಮೇಲ್ಚಾವಣಿ ಮುರಿದು ಬಿದ್ದಿದ್ದು ಸಾರ್ವಜನಿಕರು ಮಹಾನಗರ ಪಾಲಿಕೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಪೂರ್ತಿ ಮೇಲ್ಚಾವಣಿ ಕುಸಿಯುವ ಮೊದಲೆ ಸಾರ್ವಜನಿಕರಿಗೆ ಜೀವ ಹಾನಿ ಆಗುವ ಮೊದಲು ಮಹಾನಗರ ಇತ್ತ ಗಮನ ಹರಿಸಬೇಕೆಂಬುದು ಸಾರ್ವಜನಿಕರು ಮತ್ತು ಪ್ರಜಾಶಕ್ತಿ ಆಶಯ.