ಶಿವಮೊಗ್ಗ ನಗರದ ವಿನಾಯಕ ನಗರದಲ್ಲಿ ಕದಂಬ ಕನ್ನಡ ಯುವಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಡಿ ಎಸ್ ಅರುಣ್ ಉದ್ಘಾಟಿಸಿದರು.

ಈಶ್ವರ ವನದ ನವ್ಯಶ್ರೀ ನಾಗೇಶ್ ಅವರಿಗೆ, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಭೂಪಾಳಂ ಶಶಿಧರ್ ಅವರಿಗೆ, ನಿರ್ಮಲ ತುಂಗಾ ಅಭಿಯಾನ ಹಾಗೂ ಅನೇಕ ಸಮಾಜಮುಖಿ ಕೆಲಸಗಳಲ್ಲಿ ಕೈ ಜೋಡಿಸಿರುವ ಪ್ರೊ. ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕರಾಟೆ ಪ್ರದರ್ಶನ ನಡೆಯಿತು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಜೇಂದ್ರ, ಸೂಡಾ ಮಾಜಿ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಸರ್ಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಧನಂಜಯ್ ಸರ್ಜಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಹೆಚ್ ಸಿ ಯೋಗೀಶ್ ಹಾಗೂ ಸಂಘದ ಸದಸ್ಯರು,ಸ್ಥಳೀಯರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…