ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಒಳ್ಳೆಯ ಮನೋಭಾವದಲ್ಲಿ ಒಳ್ಳೆಯ ಆಡಳಿತವನ್ನು ಮಾಡಿಕೊಂಡು ಬಂದಂತವರು ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದರು.


ಅಂತಹ ವ್ಯೆಕ್ತಿಯ ಮಗನಾದ ಮಧು ಬಂಗಾರಪ್ಪ ನವರು ಸಚಿವರಾಗಿ ಕೆಲಸ ಮಾಡುತ್ತಿರುವ ನೀವು ಕೇಂದ್ರ ಸರ್ಕಾರದ ವಿಕಸಿತ ಭಾರತದ ಕಾರ್ಯಕ್ರಮಕ್ಕೆ ನೀವು ಹೋಗಬಾರದು ಎಂದು ಸರ್ಕಾರಿ ಅಧಿಕಾರಿ ವರ್ಗಕ್ಕೆ ಧಮ್ಕಿಯನ್ನು ಹಾಕೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.


ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಸಚಿವ ಮಧು ಬಂಗಾರಪ್ಪ ರವರನ್ನು ಸಂಪುಟದಿಂದ ವಜಾ ಮಾಡಬೇಕು.
ಭಾರತವು ಒಕ್ಕೂಟದ ವ್ಯವಸ್ಥೆಯಲ್ಲಿ ಬಂದಿರುವಂತದ್ದು. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರಂತೆ ಈರೀತಿ ಅಧಿಕಾರಿಗಳಿಗೆ ಧಮ್ಕಿ ಹಾಕೋದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ವರದಿ: ಸಂತೋಷ್ ರಾಮ್